Publish Date: Fri, 08 Nov 2019 (12:50 IST)
Updated Date: Fri, 08 Nov 2019 (13:07 IST)
ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ ಶುರುವಾಗಿರುವಂತೆ ರಾಜ್ಯದಲ್ಲಿ ಅಯೋಧ್ಯೆ ತೀರ್ಪಿಗೂ ಹಾಗೂ ಹೈ ಅಲರ್ಟ್ ಘೋಷಣೆಗೂ ಸಂಬಂಧವಿಲ್ಲ. ಹೀಗಂತ ಸಿಎಂ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದು, ಅಯೋಧ್ಯೆ ತೀರ್ಪು ಹಿನ್ನೆಲೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಇಲ್ಲ. ಅಯೋಧ್ಯೆ ತೀರ್ಪಿಗೂ, ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆಗೂ ಸಂಬಂಧವಿಲ್ಲ.
ತೀರ್ಪು ಪರ-ವಿರೋಧ ಏನೇ ಬಂದ್ರೂ ಸ್ವೀಕರಿಸಬೇಕು. ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಇಲ್ಲ ಅಂತ ಹೇಳಿದ್ರು ಸಿಎಂ.
ಇನ್ನು, ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ಬಿಜೆಪಿ ನಾಯಕರು, ಅಧಿಕಾರಿಗಳು ಟಾರ್ಚರ್ ನೀಡ್ತಿದ್ದಾರೆ ಅನ್ನೋ ಆರೋಪಕ್ಕೆ ನೋ ಕಾಮೆಂಟ್ಸ್ ಎಂದರು ಬಿಎಸ್ವೈ.