Publish Date: Sat, 12 May 2018 (10:22 IST)
Updated Date: Sat, 12 May 2018 (10:24 IST)
ಬೆಂಗಳೂರು: ಮತದಾನ ಮಾಡಲು ಜನಸಾಮಾನ್ಯರು, ಜನನಾಯಕರು ಎಂಬ ಬೇಧವಿಲ್ಲ. ಎಲ್ಲರೂ ಸರತಿ ಸಾಲಲ್ಲಿ ನಿಂತು ಮತದಾನ ಮಾಡಲೇಬೇಕು. ಆದರೆ ಇಲ್ಲೊಬ್ಬ ಬಿಜೆಪಿ ಸಂಸದರು ಮತಗಟ್ಟೆ ಅಧಿಕಾರಿಗಳ ಮೇಲೆ ದರ್ಪ ತೋರಿದ್ದಾರೆ.
ದಾವಣಗೆರೆ ಸಂಸದ ಸಿದ್ದೇಶ್ವರ್ ಮತಗಟ್ಟೆ ಅಧಿಕಾರಿಗಳಿಗೆ ಆವಾಜ್ ಹಾಕಿದ್ದಾರೆ. ಮತ ಹಾಕಲು ಬಂದಾಗ ಮತಗಟ್ಟೆ ಅಧಿಕಾರಿಗಳು ವೋಟರ್ ಐಡಿ ತೋರಿಸಿ ಎಂದು ಕೇಳಿದಾಗ ಸಿದ್ದೇಶ್ವರ್ ಕೆಂಡಾಮಂಡಲರಾಗಿದ್ದಾರೆ.
ನಾನು ಯಾರೆಂದು ಗೊತ್ತಾ? ಎಂದು ಆವಾಜ್ ಹಾಕಿದ್ದಾರೆ. ಕೊನೆಗೆ ಅವರನ್ನು ಸಮಾಧಾನಿಸಿ ಕಳುಹಿಸಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.