Select Your Language

Notifications

webdunia
webdunia
webdunia
webdunia

B Dayanand: ಬಿ ದಯಾನಂದ್ ಎಷ್ಟು ಕರ್ತವ್ಯ ನಿಷ್ಠರು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ

B Dayanand

Krishnaveni K

ಬೆಂಗಳೂರು , ಸೋಮವಾರ, 9 ಜೂನ್ 2025 (15:18 IST)
ಬೆಂಗಳೂರು: ನಗರ ಕಮಿಷನರ್ ಆಗಿದ್ದ ಬಿ ದಯಾನಂದ್ ಎಂಥಾ ಕರ್ತವ್ಯ ನಿಷ್ಠರು ಎಂಬುದಕ್ಕೆ ಸಾಕ್ಷಿಯಾಗಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ಅವರನ್ನು ಅಮಾನತು ಮಾಡಲಾಗಿದೆ.

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರನ್ನು ಅಮಾನತು ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಬಿ ದಯಾನಂದ್ ಕುರಿತಾದ ವಿಡಿಯೋವೊಂದು  ವೈರಲ್ ಆಗಿದೆ.

ಅಪ್ಪಟ ಕನ್ನಡಿಗ ಅಧಿಕಾರಿ ಬಿ ದಯಾನಂದ್ ಯಾವ ಪ್ರಭಾವಿಗಳಿಗೂ ಬಗ್ಗುತ್ತಿರಲಿಲ್ಲ. ಕೆಲಸದ ಬಗ್ಗೆ ಅವರಿಗೆ ಅಷ್ಟು ನಿಷ್ಠೆಯಿತ್ತು. ತಮ್ಮ 35 ವರ್ಷಗಳ ವೃತ್ತಿ ಜೀವನದಲ್ಲಿ ಒಮ್ಮೆಯೂ ಅವರು ರಜೆ ಹಾಕಿಲ್ಲವಂತೆ. ರಘು ರಾಮಪ್ಪ ಅವರ ಇನ್ ಸ್ಟಾಗ್ರಾಂ ಪುಟದಲ್ಲಿ ಬಿ ದಯಾನಂದ್ ಜೊತೆಗಿನ ಸಂದರ್ಶನದ ತುಣುಕನ್ನು ಹಂಚಿಕೊಂಡಿದ್ದಾರೆ.

ಇದರಲ್ಲಿ ಅವರು ಹಲವು ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಇದುವರೆಗೆ ರಜೆ ಹಾಕಿಲ್ಲ. ಮಕ್ಕಳ ನಾಮಕರಣಕ್ಕೂ ಹೋಗಿಲ್ಲ. ನಾನು ಯಾವುದಕ್ಕೂ ಹೋಗಲ್ಲ ಎಂದು ನನ್ನ ಈಗ ಯಾವುದಕ್ಕೂ ಕರೆಯುವುದನ್ನೂ ಬಿಟ್ಟಿದ್ದಾರೆ ಎಂದು ನಗುತ್ತಾರೆ. ಕೆಲಸದ ನಿಮಿತ್ತ ತಮ್ಮ ಎಂಗೇಜ್ ಮೆಂಟ್ ನ್ನು ಒಂದು ದಿನ ಮುಂದೂಡಿದ್ದರಂತೆ. ಅವರ ಈ ವಿಡಿಯೋ ನೋಡಿ ಸಾಕಷ್ಟು ಜನರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರಿಗೆ ಎರಡು ನಾಲಿಗೆ, ಗಳಿಗೆಗೊಂದು ಬಣ್ಣ: ಸಿಎಂ ಸಿದ್ದರಾಮಯ್ಯ