Select Your Language

Notifications

webdunia
webdunia
webdunia
webdunia

B Dayanand: ಯಾರದ್ದೋ ತಪ್ಪಿಗೆ ಬಡ್ತಿ ಸಿಗಬೇಕಿದ್ದ ಪ್ರಾಮಾಣಿಕ ಕಮಿಷನರ್ ಬಿ ದಯಾನಂದ್ ಅಮಾನತು

B Dayanand

Krishnaveni K

ಬೆಂಗಳೂರು , ಶುಕ್ರವಾರ, 6 ಜೂನ್ 2025 (08:28 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತಕ್ಕೆ ಈಗ ಕಮಿಷನರ್ ಬಿ ದಯಾನಂದ್ ತಲೆದಂಡವಾಗಿದೆ. ಯಾರದ್ದೋ ತಪ್ಪಿಗೆ ಪ್ರಾಮಾಣಿಕ ಕನ್ನಡಿಗ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಬಿ ದಯಾನಂದ್ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದವರು. ಆಗಲೇ ಸಿಎಂ ಸಿದ್ದರಾಮಯ್ಯ ಬಳಿ ಭೇಷ್ ಎನಿಸಿಕೊಂಡವರು. ಸಿಎಂ ಮೆಚ್ಚಿನ ಅಧಿಕಾರಿಯಾಗಿದ್ದ ಬಿ ದಯಾನಂದ್ ಕೆಲವೇ ದಿನಗಳಲ್ಲಿ ಬಡ್ತಿ ಪಡೆಯಬೇಕಿತ್ತು. ಆದರೆ ಈಗ ಬಡ್ತಿ ಸಮಯದಲ್ಲೇ ಅಮಾನತು ಆಗಿದ್ದಾರೆ. ಇದರೊಂದಿಗೆ ಅವರ ಮುಂಬಡ್ತಿ ಕನಸಿಗೆ ಕೊಳ್ಳಿ ಬಿದ್ದಿದೆ.

ಒಬ್ಬ ಕಮಿಷನರ್ ಅಮಾನತು ಆಗುತ್ತಿರುವುದು ಇದೇ ಮೊದಲು. ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು ಘಟನೆಯಲ್ಲಿ ದಯಾನಂದ್ ಗಿಂತ ಹೆಚ್ಚು ಹೊಣೆ ಹೊರಬೇಕಾಗಿದ್ದು ಸರ್ಕಾರ. ಎರಡೆರಡು ಕಡೆ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲದೆ, ಪೊಲೀಸರ ಸಲಹೆಯನ್ನೂ ಮೀರಿ ಕಾರ್ಯಕ್ರಮ ಆಯೋಜಿಸಿದ್ದು ಕೆಎಸ್ ಸಿಎ, ಆರ್ ಸಿಬಿ ತಪ್ಪು.

ಆದರೆ ಇದಕ್ಕಾಗಿ ದಕ್ಷ ಅಧಿಕಾರಿಯೊಬ್ಬರನ್ನು ಅಮಾನತು ಮಾಡಿರುವುದು ಎಷ್ಟು ಸರಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರದ್ದೋ ತಪ್ಪಿಗೆ ದಯಾನಂದ್ ಹರಕೆ ಕುರಿಯಾದರು ಅಷ್ಟೇ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ರಾಜ್ಯದಲ್ಲಿ ಇಂದು ಇಲ್ಲಿ ಬಿಸಿಲು, ಇಲ್ಲಿ ಮಾತ್ರ ಮಳೆ