Select Your Language

Notifications

webdunia
webdunia
webdunia
webdunia

Chinnaswamy stampede: ಪೊಲೀಸರು ಸೆಲೆಬ್ರೇಷನ್ ಬೇಡ ಎಂದಿದ್ರೂ ಹಠ ಹಿಡಿದವರು ಇವರೇ

Chinnaswamy

Krishnaveni K

ಬೆಂಗಳೂರು , ಗುರುವಾರ, 5 ಜೂನ್ 2025 (09:14 IST)
Photo Credit: X
ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯ ಹಿಂದಿನ ಕಾರಣಗಳು ಈಗ ಒಂದೊಂದೇ ಬಯಲಾಗುತ್ತಿದೆ. ಪೊಲೀಸರು ಸೆಲೆಬ್ರೇಷನ್ ಬೇಡ ಎಂದಿದ್ದರೂ ಈ ವ್ಯಕ್ತಿಗಳೇ ಹಠ ಹಿಡಿದು ನಿನ್ನೆಯೇ ಸೆಲೆಬ್ರೇಷನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೊನ್ನೆಯಷ್ಟೇ ಆರ್ ಸಿಬಿ ಕಪ್ ಗೆದ್ದಿದೆ. ನಿನ್ನೆಯೇ ಸೆಲೆಬ್ರೇಷನ್ ಮಾಡುವ ಧಾವಂತವೇನಿತ್ತು ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಪೊಲೀಸರೂ ನಿನ್ನೆಯೇ ಸೆಲೆಬ್ರೇಷನ್ ಬೇಡ ಎಂದು ನಿರಾಕರಿಸಿದ್ದರು. ಏಕಾಏಕಿ ಮೆರವಣಿಗೆ, ಸೆಲೆಬ್ರೇಷನ್ ಎಂದರೆ ಸಾಕಷ್ಟು ಜನ ಸೇರುತ್ತಾರೆ ಎಂಬ ಅಂದಾಜು ಪೊಲೀಸರಿಗಿತ್ತು.

ಹೀಗಿದ್ದಾಗ ಸೆಕ್ಯುರಿಟಿ ನೀಡುವುದು ಕಷ್ಟ ಎಂದು ಪೊಲೀಸರು ಸರ್ಕಾರಕ್ಕೆ ಹೇಳಿದ್ದರು. ಹೀಗಾಗಿ ಎರಡು ದಿನ ಕಳೆದು ಸೆಲೆಬ್ರೇಷನ್ ಮಾಡಬಹದು. ಆಗ ಭದ್ರತೆ ನಿಯೋಜಿಸಲು ಸಮಯವೂ ಸಿಕ್ಕಂತಾಗುತ್ತದೆ ಎಂದಿದ್ದರು. ಆದರೆ ಸರ್ಕಾರದ ಕೆಲವು ಪ್ರಭಾವೀ ಸಚಿವರೇ ನಿನ್ನೆಯೇ ಸೆಲೆಬ್ರೇಷನ್ ಮಾಡಬೇಕು ಎಂದು ಪಟ್ಟು ಹಿಡಿದು ಕೂತಿದ್ದರು. ಈ ಕಾರಣಕ್ಕಾಗಿಯೇ ಪೊಲೀಸರ ಸಲಹೆಯನ್ನೂ ಲೆಕ್ಕಿಸದೇ ನಿನ್ನೆಯೇ ಸೆಲೆಬ್ರೇಷನ್ ಮಾಡಲಾಯಿತು. ಅದಲ್ಲದೇ ಎರಡೆರಡು ಕಡೆ ಸೆಲೆಬ್ರೇಷನ್ ಮಾಡಿದ್ದೇ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ ಎನ್ನಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

Chinnaswamy stampede: ಅಣ್ಣಾವ್ರು ತೀರಿಕೊಂಡಾಗಲೂ ಹೀಗೇ ಆಗಿತ್ತು