Select Your Language

Notifications

webdunia
webdunia
webdunia
Sunday, 6 April 2025
webdunia

ಬೈಕ್ ಅಡ್ಡಗಟ್ಡಿ ಅಪರಿಚಿತ ವ್ಯಕ್ತಿಯಿಂದ ಮಾರಕಾಸ್ತ್ರಗಳಿಂದ ಹಲ್ಲೆ

Assaulted by an unknown person at the bike crossing
ಚಿಂತಾಮಣಿ , ಭಾನುವಾರ, 11 ಸೆಪ್ಟಂಬರ್ 2022 (20:32 IST)
ತಾಲೂಕು ಅಂಬಾಜಾದುರ್ಗ ಹೋಬಳಿಯ ಉಪ್ಪಾರಪೇಟೆ ಗ್ರಾಮದಲ್ಲಿ  ವಾಟರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೈಯದ್ ನೌಶಾದ್  ರಾತ್ರಿ ಚಿಂತಾಮಣಿ ನಗರಕ್ಕೆ ಬಂದು ನಂತರ  ಮನೆಗೆ ತೆರಳುವ ಸಂದರ್ಭದಲ್ಲಿ ಕೋನಪ್ಪಲ್ಲಿ ಗೇಟ್ ಬಳಿ ಬೈಕ್ ಅಡ್ಡಗಟ್ಡಿ ಅಪರಿಚಿತರು ನೌಶಾದ್  ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ  ನಡೆದಿದೆ.
 
ಸ್ಥಳಿಯರು ಗಾಯಾಳು ಸೈಯದ್ ನೌಶಾದ್ ರವರನ್ನು ಚಿಂತಾಮಣಿ ಸರ್ಕಾರಿ  ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.  ಪ್ರಥಮ ಚಿಕಿತ್ಸೆ ಕೋಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ರವಾನಿಸಲಾಗಿದೆ.
 
ಚಿಂತಾಮಣಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿ ಗಾಯಾಳು ನೀಡಿದ ದೂರಿನ‌ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರಂತರ ಮಳೆಗೆ ಬಂಡೆ ಕುಸಿತದಿಂದ ಭೂಮಿ ಕಂಪನ