Publish Date: Sun, 11 Sep 2022 (20:22 IST)
Updated Date: Sun, 11 Sep 2022 (20:25 IST)
ಮಳೆಯಿಂದ ಅಪಾರ್ಟ್ಮೆಂಟ್ ಗಳನ್ನ ತೊರೆದು ಹೋದ ಜನರು ಮರಳಿ ತಮ್ಮ ಮನೆಗಳನ್ನ ಸೇರಿದ್ದಾರೆ. ಅಪಾರ್ಟ್ಮೆಂಟ್ ಗಳಲ್ಲಿ ನೀರು ಕಡಿಮೆಯಾಗಿದ್ದು,ಈಗ ತಮ್ಮ ತಮ್ಮ ಮನೆಗಳನ್ನು ನೋಡಿ ಮನೆಯ ಮಾಲೀಕರು ಬೇಸರ ವ್ಯಕ್ತಪಡಿಸ್ತಿದ್ದಾರೆ.
ಒಂದು ವಾರದಿಂದೆ ಕಂಟ್ರಿ ಸೈಡ್ ಅಪಾರ್ಟ್ಮೆಂಟ್ ಜಲ ದಿಗ್ಬಂದನವಾಗಿತ್ತು.ಹೀಗಾಗಿ ಹೋಟೆಲ್ ನಲ್ಲಿ ನಿವಾಸಿಗಳು ಉಳಿದುಕೊಂಡಿದ್ದರು.ಮನೆಗೆ ನೀರು ಹೋಗಿ ಮನೆಯ ವಸ್ತುಗಳು ಹಾನಿಯಾಗಿತ್ತು.ಸರ್ಜಾಪುರದಲ್ಲಿ ಇರುವ ಕಂಟ್ರಿ ಸೈಡ್ ಅಪಾರ್ಟ್ಮೆಂಟ್ ನಲ್ಲಿ ಈಗ ಜನರು ಮರಳಿ ಬಂದಿದ್ದರು.ತಮ್ಮ ವಸ್ತುಗಳನ್ನ ಕಳೆದುಕೊಂಡ ಬೇಸರ ಮಾತ್ರ ಹಾಗೆ ಉಳಿದಿದೆ.