Publish Date: Sun, 01 Apr 2018 (05:14 IST)
Updated Date: Sun, 01 Apr 2018 (05:26 IST)
ಬೆಂಗಳೂರು: ನಟ, ಶಾಸಕ, ಅಂಬರೀಷ್ ಗೆ ಮಂಡ್ಯ ಟಿಕೆಟ್ ಕಾಂಗ್ರೆಸ್ ಪಕ್ಕಾ ಮಾಡಿದೆ ಎನ್ನಲಾಗಿತ್ತು. ಆದರೆ ನಟ ಅಂಬಿ ಮಾತ್ರ ಇನ್ನೂ ತಮ್ಮ ಸ್ಪರ್ಧೆ ಬಗ್ಗೆ ಫೈನಲ್ ನಿರ್ಧಾರ ಕೈಗೊಂಡಿಲ್ಲವಂತೆ.
ನಿನ್ನೆ ಬೆಂಗಳೂರಿನಲ್ಲಿ ಬೆಂಬಲಿಗರ ಜತೆ ಸಭೆ ನಡೆಸಿದ ಅಂಬರೀಷ್ ಮಂಡ್ಯದಿಂದ ಸ್ಪರ್ಧೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಚರ್ಚಿಸಿದರು. ಈ ವೇಳೆ ಅಭಿಮಾನಿಗಳ ಒತ್ತಡಕ್ಕೆ ಸಿಟ್ಟಾಗಿ ‘ಈವತ್ತಿನ ರಾಜಕೀಯ ಸರಿಯಿಲ್ಲ. ನಂಗೆ ವಯಸ್ಸಾಯ್ತು. ಆರೋಗ್ಯವೂ ಸರಿ ಇಲ್ಲ’ ಎಂದಿದ್ದಾರೆ.
ಹೀಗಾಗಿ ಅಂಬರೀಷ್ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ನಾಳೆ ಖಚಿತವಾದ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ