Select Your Language

Notifications

webdunia
webdunia
webdunia
webdunia

ಇದೊಂದು ಕಾರಣಕ್ಕೆ ನಮ್ಮಪ್ಪ ಸಿಎಂ ಆಗಬೇಕು ಎಂದಿದ್ದ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ

Aishwarya DK Shivakumar
ಬೆಂಗಳೂರು: ಇದೊಂದು ಕಾರಣಕ್ಕೆ ನಮ್ಮಪ್ಪ ಸಿಎಂ ಆಗಬೇಕು ಎಂದು ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಡಿಕೆ ಸುವರ್ಣ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಇತ್ತೀಚೆಗೆ ಹೇಳಿದ್ದರು. ಅದೀಗ ನಿಜವಾಗುತ್ತಿದೆ.

ಡಿಕೆ ಶಿವಕುಮಾರ್ ನಾಳೆ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಸಿಎಂ ಆಗುವುದು ಅವರ ಬಹುದಿನಗಳ ಕನಸಾಗಿತ್ತು. ಅವರ ಪಕ್ಷ ನಿಷ್ಠೆಗೆ ಈಗ ಫಲ ಸಿಕ್ಕಿದೆ.  ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಮಹಿಳಾ ದಿನಾಚರಣೆ ಪ್ರಯುಕ್ತ ಸುವರ್ಣ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಡಿಕೆಶಿ ಮಗಳು ಐಶ್ವರ್ಯಾ ನಮ್ಮಪ್ಪ ಯಾಕೆ ಸಿಎಂ ಆಗಬೇಕು ಎಂದು ಹೇಳಿದ್ದರು. ಅವರು ರಾಜಕೀಯಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಒಂದು ದಿನ ನಾವು ಫ್ಯಾಮಿಲಿ ಟೂರ್ ಹೋಗಿದ್ದಿಲ್ಲ. ಒಮ್ಮೆ ಹೋಗಿದ್ದರೂ ಕೆಲಸದ ನಿಮಿತ್ತ ಹೋಗಿ ವಾಪಸ್ ಬಂದಿದ್ದೆವು.

ಅವರು ಜೈಲಿನಿಂದ ಹೊರಬಂದ ತಕ್ಷಣ ಕುಟುಂಬದವರನ್ನು ನೋಡಲು ಬರಲಿಲ್ಲ. ಅವರನ್ನು ಪ್ರೀತಿಸುವ ಜನರನ್ನು ನೋಡಲು ಹೋದರು. ನಾನು ಜೈಲಿಗೆ ಹೋಗಿದ್ದಾಗ ಇದೇ ಜನರು ಚಪ್ಪಲಿಯಿಲ್ಲದೇ ಪ್ಲೇನ್ ಹತ್ತಿದ್ದಾರೆ, ನನಗಾಗಿ ಜೈಲಿನ ಹೊರಗೆ ಊಟ ಇಲ್ಲದೇ ಕಾದು ನಿಂತಿದ್ದಾರೆ. ಅವರನ್ನು ಬಿಟ್ಟು ನಾನು ಕುಟುಂಬದವರನ್ನು ನೋಡಲು ಹೇಗೆ ಬರಲಿ ಎಂದಿದ್ದರು. ಅವರ ತ್ಯಾಗಕ್ಕಾದರೂ ಅವರು ಒಮ್ಮೆ ಸಿಎಂ ಆಗಲೇಬೇಕು ಎಂದಿದ್ದರು. ಅದೀಗ ನಿಜವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತ್ವಿಶಾ ಶರ್ಮಾ ಸಾವು ಪ್ರಕರಣ: ಪತಿ, ಅತ್ತೆಗೆ 14ದಿನಗಳ ನ್ಯಾಯಾಂಗ ಬಂಧನ