Select Your Language

Notifications

webdunia
webdunia
webdunia
webdunia

ಹೊಸ ಸಿಎಂ ಡಿಕೆ ಶಿವಕುಮಾರ್ ಗೆ ಇದೊಂದು ಹೂ ಎಂದರೆ ಅಲರ್ಜಿಯಂತೆ: ಅದ್ಯಾಕೆ ಗೊತ್ತಾ

DK Shivakumar
ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆ ಬಳಿಕ ಕರ್ನಾಟಕದ ನೂತನ ಸಿಎಂ ಆಗಲಿರುವ ಡಿಕೆ ಶಿವಕುಮಾರ್ ಗೆ ಇದೊಂದು ಹೂ ಎಂದರೆ ಅಲರ್ಜಿಯಂತೆ. ಅದು ಯಾಕೆ ಗೊತ್ತಾ?

ಡಿಕೆ ಶಿವಕುಮಾರ್ ಸಿಎಂ ಆಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಗಲೇ ಅವರಿಗೆ ಹೋದಲ್ಲೆಲ್ಲಾ ಜನ ಹಾರ ಹಾಕಿ ಭರ್ಜರಿ ಸ್ವಾಗತ ಕೋರುತ್ತಿದ್ದಾರೆ. ಈ ನಡುವೆ ಡಿಕೆಶಿ ಈ ರೀತಿ ಹಾರ ತುರಾಯಿ ಹಾಕುವವರಿಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರೆ.

ಹೊಸ ಸಿಎಂಗೆ ಅಭಿನಂದನೆ ಸಲ್ಲಿಸಲು ಬರುವವರು ಯಾರೂ ಹೂವಿನ ಹಾರ ತರೋ ಹಾಗೇ ಇಲ್ಲ. ತಮ್ಮ ಮನೆಯ ಹತ್ತಿರ ಹೂವಿನ ಹಾರವನ್ನೇ ನಿಷೇಧ ಮಾಡಿದ್ದಾರಂತೆ ಡಿಕೆ ಶಿವಕುಮಾರ್. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನನಗೆ ಹೂವಿನ ಹಾರ ಹಾಕೋದೇ ಬೇಡ. ನನಗೆ ಹೂವಿನ ಆಗಿ ಬರೋಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಅದರಲ್ಲೂ ಸುಗಂಧ ರಾಜ ಹೂ ಎಂದರೆ ಡಿಕೆಶಿಗೆ ಅಗೋದೇ ಇಲ್ವಂತೆ. ಇದು ನನಗೆ ಅಲರ್ಜಿ ಉಂಟು ಮಾಡುತ್ತದೆ. ಮೈ ಎಲ್ಲಾ ಕಡಿತವಾಗುತ್ತದೆ. ಹಾಗಾಗಿ ನನಗೆ ಹೂವಿನ ಹಾರ ಹಾಕಬೇಡಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂ ಬೆಳಿಗ್ಗೆ ವಾಣಿಜ್ಯ ಬಳಕೆ ಸಿಲಿಂಡರ್ ದರ ಏರಿಕೆ ಶಾಕ್