Publish Date: Fri, 05 Jan 2024 (14:20 IST)
Updated Date: Fri, 05 Jan 2024 (14:17 IST)
ಎಣ್ಣೆ ಕೊಡಿಸದಿದ್ದಕ್ಕೆ ಹಿರಿಯ ನಾಗರೀಕನಿಗೆ ಇಟ್ಟಿಗೆಯಿಂದ ಮುಖಕ್ಕೆ ಹಲ್ಲೆ ಮಾಡಿ ಕಾಲಲ್ಲಿ ಒದ್ದು ವಿಕೃತಿ ಮೆರೆದ ಘಟನೆ ಗಿರಿನಗರದ ಮೂಕಾಂಭಿಕನಗರದಲ್ಲಿ ನಡೆದಿದೆ.ಘಟನೆ ನಂತರ ಆರೋಪಿ ಧರ್ಮ ತಲೆಮರೆಸಿಕೊಂಡಿದ್ದಾನೆ.ಸಿಂಗಾರ ವೇಲು ಎಂಬುವವರು ಗಿರಿನಗರದ ಮನೆಬಳಿ ಕಬಾಬ್ ತಿನ್ನುತ್ತಿದ್ರು.ಈ ವೇಳೆ ಆರೋಪಿ ಧರ್ಮ ಎಂಟ್ರಿಕೊಟ್ಟಿದ.
ಎಣ್ಣೆ ಕೊಡಿಸು ಅಂತ ಸಿಂಗಾರ ವೇಲುರಿಗೆ ಪೀಡಿಸಿದ್ದಾನೆ.ಕೊಡಿಸದಿದ್ದಾಗ ಕಾಲಲ್ಲಿ ಒದ್ದಿದ್ದಲ್ಲದೇ,ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ.ಹಲ್ಲೆ ನಡೆಸಿದ ಪರಿಣಾಮ ಸಿಂಗಾರ ವೇಲುರ ತುಟಿ ಹರಿದುಹೋಗಿದೆ.ಸದ್ಯ ಆಸ್ಪತ್ರೆಯಲ್ಲಿ ಸಿಂಗಾರವೇಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾನೆ.ಹಲ್ಲೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಡಿಸೆಂಬರ್ 29 ರ ರಾತ್ರಿ 8:30 ರ ಸುಮಾರಿಗೆ ಘಟನೆ ನಡೆದಿದೆ.ಗಿರಿನಗರ ಪೊಲೀಸರಿಂದ ಆರೋಪಿ ಧರ್ಮನಿಗಾಗಿ ತಲಾಶ್ ನಡೆಸಲಾಗಿದೆ.