Select Your Language

Notifications

webdunia
webdunia
webdunia
webdunia

ಕ್ವಾರ್ಟರ್‌ ಎಣ್ಣೆಗಾಗಿ ಬೈಕ್ ಕದಿಯುತ್ತಿದ್ದ ಕುಡುಕ ಕಳ್ಳನ ಬಂಧನ

ಕ್ವಾರ್ಟರ್‌ ಎಣ್ಣೆಗಾಗಿ ಬೈಕ್ ಕದಿಯುತ್ತಿದ್ದ ಕುಡುಕ ಕಳ್ಳನ ಬಂಧನ
bangalore , ಭಾನುವಾರ, 5 ನವೆಂಬರ್ 2023 (16:00 IST)
ಎಣ್ಣೆಗಾಗಿ ಬೈಕ್ ಕದಿಯುತ್ತಿದ್ದ ಕುಡುಕ ಖತರ್ನಾಕ್ ಕಳ್ಳ ಲಕ್ಷ್ಮಣ್ ಎಂಬ ಆರೋಪಿಯನ್ನ ಬಂಧಿಸಿದ್ದಾರೆ.ದಿನ ಮದ್ಯ ಸೇವಿಸಬೇಕೆಂದು‌ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ.ಒಂದು ಕ್ವಾರ್ಟರ್ ಎಣ್ಣೆಗಾಗಿ ಕದ್ದು ಅಪಾಚಿ ಬೈಕ್ ಮಾರಿದ್ದ,ಮದ್ಯ ಸೇವಿಸಲು ಬೈಕ್ ಕದ್ದು ಬ್ಯಾಟರಿಯನ್ನ ಅಸಾಮಿ ಮಾರುತ್ತಿದ್ದ .ಒಂದು ಠಾಣಾ ವ್ಯಾಪ್ತಿಯಲ್ಲಿ  ಕದ್ದು ಮತ್ತೊಂದು ಠಾಣಾ ವ್ಯಾಪ್ತಿಯಲ್ಲಿ ಬೈಕ್ ಬಿಟ್ಟು ಹೋಗುತ್ತಿದ್ದ.ಬೈಕ್ ನ ಬ್ಯಾಟರಿ, ಟೈರ್ ತೆಗೆದುಕೊಂಡು ಬೈಕ್ ಅಲ್ಲೇ ಬಿಟ್ಟು ಪರಾರಿಯಾಗುತ್ತಿದ್ದ.
 
ಕೆಲ ತಿಂಗಳ ಹಿಂದೆ ಪೊಲೀಸರ ಕೈಗೆ ಲಾಕ್ ಆಗಿ ಜೈಲು ಸೇರಿದ್ದ.ಜೈಲಿಂದ ರೀಲಿಸ್ ಆಗಿ ಮತ್ತೆ ಬೈಕ್ ಕಳ್ಳತನ ಮುಂದುವರೆಸಿದ್ದ.ಆರೋಪಿ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ  ಒಟ್ಟು 15 ಪ್ರಕರಣವಿದ್ದುಸದ್ಯ ಕುಡುಕ‌ ಲಕ್ಷ್ಮಣನನ್ನು  ಗಿರಿನಗರ ಪೊಲೀಸರು ಲಾಕ್ ಮಾಡಿದ್ದಾರೆ.ಬಂಧಿತನಿಂದ  11,55 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನ ಸೀಜ್ ಮಾಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಹಬ್ಬ ಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್