Select Your Language

Notifications

webdunia
webdunia
webdunia
webdunia

KRS ಗ್ರಾಮದ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ

KRS ಗ್ರಾಮದ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ
ಮಂಡ್ಯ , ಮಂಗಳವಾರ, 29 ನವೆಂಬರ್ 2022 (16:53 IST)
ಚಿರತೆ ಮತ್ತೆ KRS ಗ್ರಾಮದ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ನಾಯಿಯನ್ನು ಹಿಡಿಯಲು ಚಿರತೆ ಗ್ರಾಮಕ್ಕೆ ಬಂದಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಚಿರತೆ ವಾಹನ ಸವಾರರೊಬ್ಬರಿಗೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ನಾಯಿಯೊಂದನ್ನ‌ ಭೇಟಿಯಾಡಲು ಚಿರತೆ ಅಟ್ಟಿಸಿಕೊಂಡು ಬರುವಾಗ ವಾಹನದ ಹೆಡ್ ಲೈಟ್ ಸಹಾಯದಿಂದ ಚಿರತೆ ಓಡಾಟದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಹಲವು ದಿನಗಳಿಂದ ನಿರ್ಬಂಧವಾಗಿರುವ KRS ನ ಬೃಂದಾವನದಲ್ಲಿ ಕಾಣಿಸಿಕೊಂಡ ಚಿರತೆಯಿಂದಾಗಿ ಆತಂಕ ಮನೆ ಮಾಡಿದೆ. ಇದೀಗ ಗ್ರಾಮಕ್ಕೆ ಬಂದು ನಾಯಿ ಬೇಟೆಯಾಡಿರೋದನ್ನ ಕಂಡು ಜನರಲ್ಲಿ ಭಯ ಮೂಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಠಿಣ ಲಾಕ್‌ಡೌನ್ ಹೇರಿಕೆ ಸಮರ್ಥಿಸಿಕೊಂಡ ಚೀನಾ