Select Your Language

Notifications

webdunia
webdunia
webdunia
webdunia

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇದಿಸುವ ಅಭಿಯಾನ

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇದಿಸುವ ಅಭಿಯಾನ
bangalore , ಭಾನುವಾರ, 8 ಆಗಸ್ಟ್ 2021 (20:53 IST)
ಶುಚಿತ್ವ ಹಾಗೂ ಉತ್ತಮ ಹವ್ಯಾಸ ಗಳಿಂದಾಗಿ ನಾವೆಲ್ಲರೂ ದೇಹಾರೋಗ್ಯ ವನ್ನು ಕಾಪಾಡಿಕೊಳ್ಳ ಬಹುದಾಗಿರುತ್ತದೆ.  ಸ್ವಚ್ಛತೆಗೆ ನಾವೆಲ್ಲರೂ ಆದ್ಯತೆಯನ್ನು ನೀಡುವುದು, ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿಷೇಧಿಸುವ ಬರಹವಿರುವ  ಅಭಿಯಾನದ ವಾಹನಕ್ಕೆ  ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಂದು ಚಾಲನೆ ನೀಡಲಾಯಿತು.
 
ಎಲ್ಲೆoದರಲ್ಲಿ ಉಗುಳು ವುದರಿಂದ ಸಾಂಕ್ರಾಮಿಕ ರೋಗಗಳು ಹರುಡುವುದಲ್ಲದೆ, ಶುಚಿತ್ವಕೂ ಭಂಗ ಉಂಟಾಗಿ ಜನಸಾಮಾನ್ಯರಿಗೆ ಅನಾನುಕೂಲವಾಗುತ್ತದೆ.
 ನಿಗಮದ  ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವ ಕ್ರಮ ಜೂನ್ 2020 ರಿಂದ ಜಾರಿಗೆ ತರಲಾಗಿರುತ್ತದೆ.
 
 ಜನ ಸಾಮಾನ್ಯರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ Beautiful Bangalore ಹಾಗೂ Sare Jahan se accha ಫುಣೆ ತಂಡಗಳು "ಉಗುಳುವ ನಿಷೇಧದ ಅಭಿಯಾನ"  ನಿಗಮದೊಂದಿಗೆ ಸೇರಿ ಹಮ್ಮಿಕೊಂಡಿರುತ್ತಾರೆ. 
 
 ಕೊರಿನಾ  ಮಹಾಮಾರಿಯು ಪ್ರಪಂಚವನ್ನೇ ತಲ್ಲಣಕ್ಕೆ ಗುರಿಮಾಡಿರುವ ಸಂಧರ್ಭದಲ್ಲಿ ಇಂತಹ ಅಭಿಯಾನವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ.
 ಹಾಗೂ ಈ ಸಂದೇಶವನ್ನು ಎಲ್ಲಾ ಕಡೆಗೂ ಸಾರಬೇಕೆಂದು  ಕೆ ಎಸ್ ಆರ್ ಟಿ ಸಿ ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿರುವ.  ಶ್ರೀ S.R. ಚಂದ್ರ ಶೇಖರ್   ರವರು ಮನವಿ ಮಾಡಿರುತ್ತಾರೆ.
 
 ಈ ಸಂದರ್ಭದಲ್ಲಿ ನಿಗಮದ ಪರಿಸರ ಅಧಿಕಾರಿ ಶ್ರೀ ಸತೀಶ್ ರವರು, 
Beautiful Bangalore ತಂಡದ ಸಂಸ್ಥಾಪಕರಾದ ಶ್ರೀಮತಿ. ಒಡೆಟ್ ಕಾತರಕ್  ಹಾಗೂ Sare jaha se aacha ದ  ಸಂಸ್ಥಾಪಕ ನಿರ್ದೇಶಕರುಗಳಾದ ಶ್ರೀ. ರಾಜಾ ನರಸಿಂಹನ್  ಹಾಗೂ ಶ್ರೀಮತಿ ಪ್ರೀತಿ ರಾಜಾ ಮತ್ತು ರೋಟರಿ ಕ್ಲಬ್ ವತಿಯಿಂದ ಶ್ರೀ. ಪ್ರಭು ಕಾಶೀನಾಥ್ ರವರು ನೆರೆದಿರುವ ಜನರಿಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಜನಪ್ರಿಯ ಚಲಚಿತ್ರ ನಟರಾದ ಶ್ರೀ ಪುನೀತ್ ರಾಜಕುಮಾರ್ ರವರ ವಿಡಿಯೋ ಸಂದೇಶವನ್ನು ಪ್ರದರ್ಶಿಸಲಾಯಿತು.
 
ಪ್ರತಿಜ್ಞೆ ವಿಧಿಯನ್ನು ಬಿ ಬಿ ಎಂ ಪಿ ಮಾರ್ಷಲ್ ಗಳಿಂದ ಬೋಧಿಸಲಾಯಿತು.
 
ನಿಗಮದ ಬಸ್ ನಿಲ್ದಾಣಗಳು, ಘಟಕ, ಕಾರ್ಯಾಗಾರ ಮತ್ತು ಕಛೇರಿಯ ಪ್ರದೇಶಗಳಲ್ಲಿ ಉಗುಳುವವರಿಗೆ ರೂ.100 ದಂಡವನ್ನು ವಿಧಿಸಲಾಗುತ್ತಿದೆ. ಅದರಂತೆ ಜೂನ್ 2020 ರಿಂದ ಮಾರ್ಚ್ 2021 ರವರೆಗೆ ರೂ. 4,66,500 ದಂಡ ಹಾಗೂ ಏಪ್ರಿಲ್ 2021 ರಿಂದ ಜೂನ್ 2021 ರವರೆಗೆ ರೂ.17100 ರೂ ದಂಡ ವಿಧಿಸಲಾಗಿರುತ್ತದೆ.
bbmp

Share this Story:

Follow Webdunia kannada

ಮುಂದಿನ ಸುದ್ದಿ

ಆಫ್ಘಾನ್ ಸೇನಾ ದಾಳಿಗೆ 572 ತಾಲಿಬಾನ್ ಉಗ್ರರು ಬಲಿ