Select Your Language

Notifications

webdunia
webdunia
webdunia
webdunia

ಜೆಡಿಎಸ್ ಅಭ್ಯರ್ಥಿಗೆ 7 ಟನ್ ತೂಕದ ಸೇಬಿನ ಹಾರ ಮಾಲಾರ್ಪಣೆ

ಜೆಡಿಎಸ್ ಅಭ್ಯರ್ಥಿಗೆ 7 ಟನ್ ತೂಕದ ಸೇಬಿನ ಹಾರ ಮಾಲಾರ್ಪಣೆ
ಶ್ರೀರಂಗಪಟ್ಟಣ , ಶುಕ್ರವಾರ, 4 ಮೇ 2018 (17:14 IST)
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿಯಾದ ರವೀಂದ್ರ ಶ್ರೀಕಂಠಯ್ಯಗೆ ಬೃಹತ್ ಆ್ಯಪಲ್ ಹಾರ ಮಾಲಾರ್ಪಣೆ ಮಾಡಲಾಗಿದೆ.
ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಅದ್ದೂರಿ ಸ್ಚಾಗತ ಮಾಡಿದ ಅರಕೆರೆ ಗ್ರಾಮಸ್ಥರು  7 ಟನ್ ತೂಕದ ಸೇಬಿನ ಹಾರ ಮಾಲಾರ್ಪಣೆ ಮಾಡಿ ಹೃದಯಪೂರ್ವಕ ಸ್ವಾಗತ ಕೋರಿದರು.
 
ಅರಕೆರೆ ಗ್ರಾಮ ರವೀಂದ್ರ ಶ್ರೀಕಂಠಯ್ಯ ತವರೂರು. ತವರೂರಿಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದ ರವೀಂದ್ರ ಶ್ರೀಕಂಠಯ್ಯ ಸಾವಿರಾರು ಜೆಡಿಎಸ್ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ‌‌‌‌‌ದೊರೆತಿದ್ದಲ್ಲದೇ ಇದೇ ವೇಳೆ ಬೆಳಗೊಳ ಗ್ರಾ.ಪ ಅಧ್ಯಕ್ಷೆ ಮುಂಜುಳಮ್ಮ ಚುನಾವಣಾ ಖರ್ಚಿಗಾಗಿ ರವೀಂದ್ರ ಶ್ರೀಕಂಠಯ್ಯ ಪತ್ನಿಗೆ 1.05 ಲಕ್ಷ ರೂ ದೇಣಿಗೆ ನೀಡಿ ಔದಾರ್ಯತೆಯನ್ನು ಮೆರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಅಭ್ಯರ್ಥಿಗೆ ಫೋನ್ ಮೂಲಕ ಬೆದರಿಕೆ ಕರೆ