Publish Date: Thu, 11 Aug 2022 (18:26 IST)
Updated Date: Thu, 11 Aug 2022 (18:39 IST)
ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಮಹಾಸ್ವಾಮಿಗಳ ಆರಾಧನೆಗೆ ಸಕಲ ಸಿದ್ದತೆಗೊಂಡಿದೆ. ರಾಯರ ಮೂಲ ಬೃಂದಾವನಕ್ಕೆ ಒಂದು ವಾರ ಮಂತ್ರಾಲಯ ಪೀಠಾಧಿಪತಿ ಸುಭುದೇಂದ್ರತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಆರಾಧನೆ ವಿಶೇಷ ಪೂಜೆ, ಅಭಿಷೇಕ, ಮಹಾ ಮಂಗಳಾರತಿಯಾಗಲಿದೆ. ನಾಡಿನ ಮೂಲೆ ಮೂಲೆಯಿಂದಲೂ ಸಹಸ್ರಾರು ಭಕ್ತರು ರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಆಗಮಿಸುತ್ತಿದ್ದು, ಆರಾಧನೆಗೆ ಬಂದಿರುವ ಭಕ್ತರಿಗೆ ಶ್ರಿಮಠದಿಂದ ಸಕಲ ಸೌಕರ್ಯದ ಸಿದ್ಧತೆ ನಡೆದಿದೆ. ತುಂಗಭದ್ರ ನದಿಗೆ ಅಪಾರ ಪ್ರಮಾಣದ ನೀರು ರಿಲೀಸ್ ಆದ ಹಿನ್ನೆಲೆ ನದಿ ದಂಡೆಯತ್ತ ತೆರಳದಂತೆ ರಾಯರ ಭಕ್ತರಿಗೆ ಮಂತ್ರಾಲಯ ಶ್ರೀಮಠವು ಸೂಚನೆ ನೀಡಿದೆ.