Select Your Language

Notifications

webdunia
webdunia
webdunia
webdunia

ಮತ್ತೆ ಭೀಕರ ಅನಾಹುತ: ದೇವರ ಪ್ರಸಾದ ಸೇವಿಸಿ 18 ಮಂದಿ ಗಂಭೀರ

ಮತ್ತೆ ಭೀಕರ ಅನಾಹುತ: ದೇವರ ಪ್ರಸಾದ ಸೇವಿಸಿ 18 ಮಂದಿ ಗಂಭೀರ
ತುಮಕೂರು , ಸೋಮವಾರ, 29 ಏಪ್ರಿಲ್ 2019 (12:55 IST)
ದೇವರ ಪ್ರಸಾದ ಸೇವಿಸಿದ್ದ ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ದೇವರ ಪ್ರಸಾದ ಸೇವಿಸಿ 18 ಮಂದಿ ಭಕ್ತರು ಅಸ್ವಸ್ಥರಾಗಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿ ಚಿನ್ನಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಆಂಜನೇಯ ಸ್ವಾಮಿ ಹರಿಸೇವೆ ಕಾರ್ಯಕ್ರಮವಿತ್ತು. ಕಾರ್ಯಕ್ರಮದ ನಂತರ ಅನ್ನ, ಸಾರು, ಪಲ್ಯ ವಿತರಣೆ ಮಾಡಲಾಗಿತ್ತು.
ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಗ್ರಾಮಸ್ಥರು ಅಸ್ಪಸ್ಥರಾಗಿದ್ದಾರೆ. 18 ಕ್ಕೂ‌ ಹೆಚ್ಚು ಜನರನ್ನ  ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಪೇದೆಯನ್ನೇ ಥಳಿಸಿದ ಕುಡುಕರು