Select Your Language

Notifications

webdunia
webdunia
webdunia
webdunia

ತೆಲುಗು, ಕನ್ನಡದಲ್ಲಿ ಮಾತ್ರ ಯುವರತ್ನ ಬಿಡುಗಡೆಗೆ ಸ್ಪಷ್ಟನೆ ಕೊಟ್ಟ ನಿರ್ದೇಶಕರು

ತೆಲುಗು, ಕನ್ನಡದಲ್ಲಿ ಮಾತ್ರ ಯುವರತ್ನ ಬಿಡುಗಡೆಗೆ ಸ್ಪಷ್ಟನೆ ಕೊಟ್ಟ ನಿರ್ದೇಶಕರು
ಬೆಂಗಳೂರು , ಗುರುವಾರ, 11 ಮಾರ್ಚ್ 2021 (10:12 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ 1 ರಿಂದ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ.


ಈ ಸಿನಿಮಾ ಎರಡೇ ಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ಯಾಕೆ? ತೆಲುಗಿನಲ್ಲಿ ಬಿಡುಗಡೆ ಮಾಡಿದ ಮೇಲೆ ತಮಿಳು, ಹಿಂದಿಯಲ್ಲೂ ಬಿಡುಗಡೆ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬಹುದಿತ್ತಲ್ಲವೇ? ಈ ಬಗ್ಗೆ ನಿರ್ದೇಶಕ ಸಂತೋಷ್‍ ಆನಂದ್ ರಾಮ್ ಸ್ಪಷ್ಟನೆ ನೀಡಿದ್ದಾರೆ.

 ಈ ಸಿನಿಮಾವನ್ನು ಕೇವಲ ಕನ್ನಡದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಆದರೆ ನಿರ್ಮಾಪಕ ವಿಜಯ್ ಕಿರಗಂದೂರ್ ಸಿನಿಮಾ ನೋಡಿ ತೆಲುಗಿಗೂ ಸೂಟ್ ಆಗಬಹುದು ಎಂದು ಆ ಭಾಷೆಯಲ್ಲೂ ರಿಲೀಸ್ ಮಾಡಲು ನಿರ್ಧರಿಸಿದರು. ಬೇರೆ ಭಾಷೆಗಳಿಗೆ ಇದು ಸೂಟ್ ಆಗುವ ಕತೆಯಲ್ಲ ಎಂದು ಎನಿಸಿತು.

ಹಾಗಾಗಿ ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಬಿಡುಗಡೆ ಮಾಡಲು ನಿರ್ಧರಿಸಿದೆವು. ಮುಂದಿನ ದಿನಗಳಲ್ಲಿ ಅಂತಹ ಕತೆಯಿದ್ದರೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಸಪ್ತ ಸಾಗರದಾಚೆಯೆಲ್ಲೊ’ ನಲ್ಲಿ ರಕ್ಷಿತ್ ಶೆಟ್ಟಿಗೆ ಹೊಸ ಲುಕ್