Select Your Language

Notifications

webdunia
webdunia
webdunia
webdunia

ಸತತ ಮೂರನೇ ವರ್ಷವೂ ವಿಷ್ಣುವರ್ಧನ್ ಸಮಾಧಿ ಬಳಿ ಬಾರದ ಕುಟುಂಬ

ಸತತ ಮೂರನೇ ವರ್ಷವೂ ವಿಷ್ಣುವರ್ಧನ್ ಸಮಾಧಿ ಬಳಿ ಬಾರದ ಕುಟುಂಬ
ಬೆಂಗಳೂರು , ಸೋಮವಾರ, 31 ಡಿಸೆಂಬರ್ 2018 (10:32 IST)
ಬೆಂಗಳೂರು: ನಿನ್ನೆ ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯ ತಿಥಿ. ಈ ಸಂದರ್ಭದಲ್ಲಿ ಮತ್ತೆ ವಿಷ್ಣು ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸ್ಮಾರಕಕ್ಕೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ್ದಾರೆ.


ಆದರೆ ವಿಷ್ಣು ಕುಟುಂಬ ಸತತ ಮೂರನೇ ವರ್ಷವೂ ಸಮಾಧಿ ಬಳಿಗೆ ಬರದೇ ಮನೆಯಲ್ಲಿಯೇ ಪೂಜೆ ಸಲ್ಲಿಸಿದೆ. ವಿಷ್ಣು ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದ ಅಸಮಾಧಾನದಿಂದಾಗಿ ವಿಷ್ಣು ಕುಟುಂಬ ಮೂರು ವರ್ಷಗಳಿಂದ ಮನೆಯಲ್ಲಿಯೇ ಪೂಜೆ ಸಲ್ಲಿಸುತ್ತಿದೆ.

ವಿಷ್ಣು ಸ್ಮಾರಕ ಮೈಸೂರಿನಲ್ಲಿ ಆಗಬೇಕೋ, ಈಗಿರುವ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕೋ ಎಂಬ ಬಗ್ಗೆ ಅಭಿಮಾನಿಗಳು, ವಿಷ್ಣು ಕುಟುಂಬದ ನಡುವೆ ಅಭಿಪ್ರಾಯ ಬೇಧವಿದೆ. ಇದೀಗ ಮತ್ತೆ ಆ ವಿಚಾರವಾಗಿ ಮಾತನಾಡಿರುವ ವಿಷ್ಣು ಅಳಿಯ ಅನಿರುದ್ಧ್ ಅಭಿಮಾನಿಗಳ ಜತೆ ನಮಗೆ ಭಿನ್ನಾಬಿಪ್ರಾಯವಿಲ್ಲ. ಸ್ಮಾರಕ ಸಮಸ್ಯೆ ವಿವಾದ ಬಗೆ ಹರಿಯಬಹುದು ಎಂಬ ವಿಶ್ವಾಸವಿದೆ ಎಂದಿದ್ದಾರೆ. ಇಷ್ಟು ದಿನ ಕಾದಿದ್ದೇವೆ. ಇನ್ನೂ ಸ್ವಲ್ಪ ದಿನ ಕಾಯುವುದಕ್ಕೆ ಅಭ್ಯಂತರವಿಲ್ಲ ಎಂದು ಅನಿರುದ್ಧ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳ ಹಣ ಬಳಸಿ ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ಮಾಡಲಾಗಿದೆಯಂತೆ!