Select Your Language

Notifications

webdunia
webdunia
webdunia
webdunia

ಪತಿ ದರ್ಶನ್ ಗಾಗಿ ಪತ್ನಿ ವಿಜಯಲಕ್ಷ್ಮಿ ತೆಗೆದುಕೊಂಡಿದ್ದಾರೆ ಬಹುದೊಡ್ಡ ನಿರ್ಧಾರ

Darshan Thoogudeepa-Vijayalakshmi

Krishnaveni K

ಬಳ್ಳಾರಿ , ಮಂಗಳವಾರ, 3 ಸೆಪ್ಟಂಬರ್ 2024 (11:22 IST)
ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪತಿ ದರ್ಶನ್ ಗಾಗಿ ಪತ್ನಿ ವಿಜಯಲಕ್ಷ್ಮಿ ಮಾಡುತ್ತಿರುವ ಕೆಲಸಗಳನ್ನು ನೋಡಿದರೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಂಡ ಎಂಥದೇ ಅಪರಾಧ ಮಾಡಿರಲಿ, ಆದರೆ ಹೆಂಡತಿಯಾಗಿ ಆತನ ಜೊತೆಗೇ ಇರುತ್ತೇನೆ ಎಂಬುದನ್ನು ವಿಜಯಲಕ್ಷ್ಮಿ ಅಕ್ಷರಶಃ ಮಾಡಿ ತೋರಿಸುತ್ತಿದ್ದಾರೆ. ಸ್ನೇಹಿತೆಗಾಗಿ ಕೊಲೆ ಮಾಡಿ ಜೈಲು ಸೇರಿದರೂ ವಿಜಯಲಕ್ಷ್ಮಿ ಪತಿಯ ಕೈ ಬಿಟ್ಟಿಲ್ಲ. ದರ್ಶನ್ ಗಾಗಿ ಪ್ರಭಾವಿಗಳ ಬಳಿ ಹೋಗಿಯೂ ಮನವಿ ಮಾಡಿದ್ದರು.

ಹಲವು ದೇವಾಲಯಗಳಿಗೆ ಹೋಗಿ, ಪೂಜೆ ಮಾಡಿಸಿ ಪತಿಗೆ ಒಳಿತಾಗಲಿ ಎಂದು ಪ್ರಯತ್ನಿಸಿದ್ದಾರೆ. ಅದಲ್ಲದೆ, ಪತಿಯನ್ನು ತಪ್ಪದೇ ಪ್ರತೀ ವಾರವೂ ನೋಡಲು ಜೈಲಿಗೆ ಬರುತ್ತಿದ್ದಾರೆ. ಮಗನನ್ನೂ ಕರೆದುಕೊಂಡು ಬಂದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಇದೀಗ ದರ್ಶನ್ ಗಾಗಿ ಮತ್ತೊಂದು ಕೆಲಸ ಮಾಡಲು ಮುಂದಾಗಿದ್ದಾರೆ.

ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ವಿಜಯಲಕ್ಷ್ಮಿ ಪ್ರತೀ ವಾರವೂ ಸುಲಭವಾಗಿ ಅವರನ್ನು ನೋಡಿಕೊಂಡು ಹೋಗುತ್ತಿದ್ದರು. ಆದರೆ ಈಗ ಗಂಡ ಬಳ್ಳಾರಿ ಜೈಲಿನಲ್ಲಿರುವ ಕಾರಣ ಅವರಿಗೆ ಬಂದು ಹೋಗಿ ಮಾಡುವುದು ಕಷ್ಟವಾಗುತ್ತಿದೆ. ಈ ಕಾರಣಕ್ಕೆ ದರ್ಶನ್ ಇರುವಷ್ಟು ಸಮಯ ಬಳ್ಳಾರಿಯಲ್ಲೇ ಮನೆ ಮಾಡಿ ನಿಲ್ಲಲೂ ತಯಾರಾಗಿದ್ದಾರೆ. ಪತಿಗಾಗಿ ಇಷ್ಟೆಲ್ಲಾ ಮಾಡುತ್ತಿರುವ ವಿಜಯಲಕ್ಷ್ಮಿಗಾದರೂ ದರ್ಶನ್ ಬದಲಾಗಲಿ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಲಂ ಫೇರ್ ಪ್ರಶಸ್ತಿ ಸಮಾರಂಭವನ್ನು ಈ ದಿನ ಟಿವಿಯಲ್ಲಿ ವೀಕ್ಷಿಸಿ