Select Your Language

Notifications

webdunia
webdunia
webdunia
webdunia

ದರ್ಶನ್ ಕೇಳಿದ್ದು ಬಳ್ಳಾರಿ ಜೈಲಿಗೆ ಬಂದೇ ಬಿಡ್ತು

Darshan

Krishnaveni K

ಬಳ್ಳಾರಿ , ಸೋಮವಾರ, 2 ಸೆಪ್ಟಂಬರ್ 2024 (16:31 IST)
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿದ್ದು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಅವರು ಸರ್ಜಿಕಲ್ ಚೇರ್ ಗೆ ಬೇಡಿಕೆಯಿಟ್ಟಿದ್ದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪಕ್ಕೊಳಗಾಗಿದ್ದ ನಟ ದರ್ಶನ್ ಬಳಿಕ ಕೋರ್ಟ್ ಆದೇಶದ ಮೇರೆಗೆ ಬಳ್ಳಾರಿ ಜೈಲಿಗೆ ವರ್ಗಾವಣೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ದರ್ಶನ್ ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಖೈದಿಯಂತೇ ಕಾಲಕಳೆಯುತ್ತಿದ್ದಾರೆ.

ಆದರೆ ಇಲ್ಲಿ ಅವರಿಗೆ ಬೆನ್ನು ನೋವು ತೀವ್ರವಾಗಿ ಕಾಡುತ್ತಿದ್ದು, ಇದಕ್ಕಾಗಿ ತಮಗೆ ಸರ್ಜಿಕಲ್ ಚೇರ್ ನೀಡುವಂತೆ ದರ್ಶನ್ ಡಿಐಜಿ ಶೇಷ ಬಳಿ ಬೇಡಿಕೆಯಿಟ್ಟಿದ್ದರು. ಕಾನೂನಿನಲ್ಲಿ ಅವಕಾಶವಿದ್ದರೆ ನೀಡುವುದಾಗಿ ಡಿಐಜಿ ಶೇಷ ಮೊನ್ನೆಯಷ್ಟೇ ಮಾಧ್ಯಮಗಳಿಗೂ ಮಾಹಿತಿ ನೀಡಿದ್ದರು.

ಅದರಂತೆ ಈಗ ಅವರ ಬೇಡಿಕೆ ಈಡೇರಿದೆ. ದರ್ಶನ್ ಗೆ ಸರ್ಜಿಕಲ್ ಚೇರ್ ಇಂದು ಬಳ್ಳಾರಿ ಜೈಲಿಗೆ ತರಲಾಗಿದೆ. ಬಳಿಕ ದರ್ಶನ್ ಗೆ ಇದನ್ನು ಬಳಸಲು ಅನುಕೂಲ ಮಾಡಿಕೊಡಲಾಗಿದೆ. ಬೆನ್ನು ನೋವಿನಿಂದಾಗಿ ಇಂಡಿಯನ್ ಸ್ಟೈಲ್ ಟಾಯ್ಲೆಟ್ ನಲ್ಲಿ ಕೂರಲು ಕಷ್ಟವಾಗುತ್ತಿದೆ ಎಂದು ದರ್ಶನ್ ಜೈಲು ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್, ಉಪೇಂದ್ರ ಸೇರಿದಂತೆ ಒಟ್ಟಿಗೇ ಪ್ರಯಾಣಿಸಿದ ಸ್ಯಾಂಡಲ್ ವುಡ್ ತಾರೆ