Select Your Language

Notifications

webdunia
webdunia
webdunia
webdunia

ಅಸಭ್ಯ ಪದ ಬಳಕೆಗೆ ರಾಕಿ ಭಾಯಿ ಯಶ್ ಫ್ಯಾನ್ಸ್ ಕ್ಷಮೆ ಕೇಳಿದ ವೆಂಕಟೇಶ್ ಮಹಾ

ಅಸಭ್ಯ ಪದ ಬಳಕೆಗೆ ರಾಕಿ ಭಾಯಿ ಯಶ್ ಫ್ಯಾನ್ಸ್ ಕ್ಷಮೆ ಕೇಳಿದ ವೆಂಕಟೇಶ್ ಮಹಾ
ಹೈದರಾಬಾದ್ , ಮಂಗಳವಾರ, 7 ಮಾರ್ಚ್ 2023 (09:40 IST)
ಹೈದರಾಬಾದ್: ಕೆಜಿಎಫ್ 2 ಸಿನಿಮಾ ಮತ್ತು ರಾಕಿ ಭಾಯಿ ಯಶ್ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ್ದ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಕೊನೆಗೂ ಕ್ಷಮೆ ಕೇಳಿದ್ದಾರೆ.

ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ವೆಂಕಟೇಶ್ ಮಹಾ ಕೆಜಿಎಫ್ 2 ಕತೆ ಬಗ್ಗೆ ತಮಾಷೆ ಮಾಡಿದ್ದಲ್ಲದೆ, ರಾಕಿ ಭಾಯಿ ಬಗ್ಗೆ ಅಸಭ್ಯ ಪದ ಬಳಕೆ ಮಾಡಿ ಟೀಕೆ ಮಾಡಿದ್ದರು. ಇದು ಯಶ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿತ್ತು. ವೆಂಕಟೇಶ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ವೆಂಕಟೇಶ್ ಮಹಾ, ‘ಅಭಿಮಾನಿಗಳಿಗೆ, ಸಿನಿ ಪ್ರಿಯರಿಗೆ ಭಾಷೆ ಸರಿ ಇಲ್ಲ ಎನಿಸುತ್ತದೆ. ನನ್ನ ಅಭಿಪ್ರಾಯವನ್ನು ಹೊರ ಹಾಕಲು ಬಳಕೆ ಮಾಡಿದ ಭಾಷೆ ವಿಚಾರವಾಗಿ ಕ್ಷಮೆ ಕೇಳುತ್ತೇನೆ. ಇದು ಸಿನಿಮಾ ಕುರಿತ ಚರ್ಚೆಯಾಗಿತ್ತು.  ಅದೇ ಸಂದರ್ಶನದಲ್ಲಿ ಕನ್ನಡ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದೇನೆ. ನನಗೆ ನನ್ನ ಅಭಿಪ್ರಾಯ ಹೊರ ಹಾಕುವ ಹಕ್ಕಿದೆ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಆದರೆ ಪದ ಬಳಕೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಸೀಕ್ರೆಟ್ ಬರ್ತ್ ಡೇ ಸೆಲೆಬ್ರೇಷನ್