Select Your Language

Notifications

webdunia
webdunia
webdunia
webdunia

ರಾಕಿ ಭಾಯಿ ಯಶ್ ಗೆ ಅಸಭ್ಯ ಪದ ಬಳಕೆ: ತೆಲುಗು ನಿರ್ದೇಶಕನ ವಿರುದ್ಧ ಯಶ್ ಫ್ಯಾನ್ಸ್ ಗರಂ

ರಾಕಿ ಭಾಯಿ ಯಶ್ ಗೆ ಅಸಭ್ಯ ಪದ ಬಳಕೆ: ತೆಲುಗು ನಿರ್ದೇಶಕನ ವಿರುದ್ಧ ಯಶ್ ಫ್ಯಾನ್ಸ್ ಗರಂ
ಹೈದರಾಬಾದ್ , ಮಂಗಳವಾರ, 7 ಮಾರ್ಚ್ 2023 (08:40 IST)
Photo Courtesy: Twitter
ಹೈದರಾಬಾದ್: ಕೆಜಿಎಫ್ 2 ಸಿನಿಮಾ ಮತ್ತು ನಾಯಕ ಯಶ್ ಬಗ್ಗೆ ಅಸಭ್ಯವಾಗಿ ನಾಲಿಗೆ ಹರಿಯಬಿಟ್ಟ ತೆಲುಗು ನಿರ್ದೇಶಕ ಕಮ್ ಆಂಕರ್ ವೆಂಕಟೇಶ್ ಮಹಾ ವಿರುದ್ಧ ಯಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಸಂದರ್ಶನವೊಂದರಲ್ಲಿ ವೆಂಕಟೇಶ್ ಮಹಾ ಕೆಜಿಎಫ್ 2 ಸಿನಿಮಾದಲ್ಲಿ ತನ್ನ ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ರಾಕಿ ಭಾಯಿ ಇಡೀ ಕೆಜಿಎಫ್ ನಲ್ಲಿರುವ ಚಿನ್ನ ವಶಪಡಿಸಿಕೊಳ್ಳುವುದು ಮತ್ತು ಅದಕ್ಕೆ ಸಹಾಯ ಮಾಡಿದವರಿಗೆ ಏನನ್ನೂ ನೀಡದೇ ಇರುವ ಕತೆಯೇ ಅಸಂಬದ್ಧವಾಗಿದೆ ಎಂದಿದ್ದಾರೆ.

ಇನ್ನೂ ಮುಂದುವರಿದು ರಾಕಿ ಭಾಯಿಗೆ ಅಸಭ್ಯ ಪದ ಬಳಸಿದ್ದಾರೆ. ಇದು ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಜನ ಗಮನಿಸಬೇಕು ಎಂದು ಬಾಯಿಗೆ ಬಂದ ಹಾಗೆ ಮಾತನಾಡಿದರೆ ತಕ್ಕ ಪರಿಣಾಮ ಎದುರಿಸಬೇಕಾದೀತು. ಮುಂದೆ ನಿಮ್ಮ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಲ್ಲ. ಹೀಗಾಗಿ ತಕ್ಷಣವೇ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಗೆ ಗಂಭೀರ ಗಾಯ