Select Your Language

Notifications

webdunia
webdunia
webdunia
webdunia

ಉಪ್ಪಿ ಅಭಿಮಾನಿ ಆರ್ಯ ಈಗ ವೇಷಧಾರಿ!

ಉಪ್ಪಿ ಅಭಿಮಾನಿ ಆರ್ಯ ಈಗ ವೇಷಧಾರಿ!
ಬೆಂಗಳೂರು , ಗುರುವಾರ, 2 ಜನವರಿ 2020 (12:59 IST)
ಸ್ಟಾರ್ ನಟರ ಸಿನಿಮಾಗಳನ್ನು ನೋಡುತ್ತಾ ಅವರಂತೆಯೇ ಆಗಬೇಕೆಂಬ ಕನಸು ಕಟ್ಟಿಕೊಳ್ಳುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿ ನಟನೆಯ ಎಲ್ಲ ಪಟ್ಟುಗಳನ್ನೂ ಕಲಿತುಕೊಂಡು ಗುರಿ ಸೇರುವವರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಅದರಲ್ಲಿಯೂ ರಿಯಲ್ ಸ್ಟಾರ್ ಉಪೇಂದ್ರ ಅವರ ನಟನೆ ಮತ್ತು ವಿಶಿಷ್ಟ ಫಿಲಾಸಫಿಗೆ ಮರುಳಾಗಿ ನಟನೆಯ ರೂಟು ಹಿಡಿದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆ ಸಾಲಿನಲ್ಲಿ ಈ ವಾಠರ ಬಿಡುಗಡೆಗೆ ರೆಡಿಯಾಗಿರುವ ವೇಷಧಾರಿ ಚಿತ್ರದ ನಾಯಕ ಆರ್ಯನ್ ಕೂಡಾ ಸೇರಿಕೊಳ್ಳುತ್ತಾರೆ.
ದಕ್ಷಿಣ ಕನ್ನಡ ಮೂಲದವರಾದ ಆರ್ಯನ್ ಶಾಲಾ ಕಾಲೇಜು ದಿನಗಳಲ್ಲಿಯೇ ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಭಾವಕ್ಕೀಡಾಗಿದ್ದವರು. ಕಾಲೇಜು ದಿನಗಳಲ್ಲಿಯೇ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸದಾ ಮುಂದಿದ್ದ ಆರ್ಯನ್ ಪಾಲಿಗೆ ಉಪೇಂದ್ರ ಅವರಂತೆಯೇ ತಾನೂ ಕೂಡಾ ವಿಶಿಷ್ಟ ನಾಯಕನಾಗಿ ನೆಲೆ ಕಂಡುಕೊಳ್ಳ ಬೇಕೆಂಬಂಥಾ ಮಹಾ ಕನಸಿತ್ತು. ಆದರೆ ಈ ಹಾದಿಯೇನು ಸಲೀಸಿನದ್ದಲ್ಲ ಎಂಬ ವಿಚಾರ ಅವರಿಗೆ ಸ್ಪಷ್ಟವಾಗಿಯೇ ಗೊತ್ತಿತ್ತು. ನಟನೆಯಲ್ಲಿ ಪಳಗಿಕೊಳ್ಳಬೇಕೆಂಬ ಉದ್ದೇಶದಿಂದಲೇ ಆರ್ಯನ್ ಹಲವಾರು ರಂಗಭೂಮಿ ತಂಡಗಳ ಜೊತೆ ಸೇರಿ ಪಳಗಿಕೊಂಡಿದ್ದರು.
 
ಹೀಗೆ ನಟನೆಯಲ್ಲಿ ಪಳಗಿಕೊಂಡಿದ್ದ ಆರ್ಯನ್ ಹಲವಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಾ ನಾಯಕ ನಟನಾಗೋ ಅವಕಾಶಕ್ಕಾಗಿ ಅರಸುತ್ತಾ ಅಡ್ಡಾಡಲಾರಂಭಿಸಿದ್ದರು. ಕಡೆಗೂ ಶಿವಾನಂದ್ ಭೂಶಿ ಅವರಿಗೆ ನಾಯಕನಾಗೋ ಅವಕಾಶ ನೀಡಿದ್ದರು. ಆರ್ಯನ್ ಇಲ್ಲಿ ಕೃಷ್ಣ ಎಂಬ ಪರಮ ಸೋಮಾರಿಯ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಆದರೆ ಆ ಪಾತ್ರಕ್ಕೆ ಹತ್ತು ಹಲವು ಮಜಲುಗಳಿದ್ದಾವೆ. ಮೊದಲ ಚಿತ್ರದಲ್ಲಿಯೇ ಇಂಥಾದ್ದೊಂದು ಸವಾಲಿನ ಪಾತ್ರ ಸಿಕ್ಕಿದರೂ ಕೂಡಾ ರಂಗಭೂಮಿಯ ಕಸುವಿನ ಕಾರಣದಿಂದ ಅದನ್ನು ಲೀಲಾಜಾಲವಾಗಿಯೇ ನಿರ್ವಹಿಸಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾರಾಯಣ’ನಿಗೆ ಇದೆಂಥಾ ಮೋಸ..! ಕನ್ನಡ ಸಿನಿಮಾಕ್ಕಿಲ್ಲವಾ ಬೆಲೆ..?