Select Your Language

Notifications

webdunia
webdunia
webdunia
webdunia

ನಟ ವಿವೇಕ್ ರವರ ಈ ಕನಸನ್ನು ನನಸು ಮಾಡಲು ಹೊರಟ ಟಿಆರ್ ಎಸ್ ಸಂಸದ ಸಂತೋಷ್ ಕುಮಾರ್

ನಟ ವಿವೇಕ್ ರವರ ಈ ಕನಸನ್ನು ನನಸು ಮಾಡಲು ಹೊರಟ ಟಿಆರ್ ಎಸ್ ಸಂಸದ ಸಂತೋಷ್ ಕುಮಾರ್
ಚೆನ್ನೈ , ಸೋಮವಾರ, 19 ಏಪ್ರಿಲ್ 2021 (11:56 IST)
ಚೆನ್ನೈ : ಎರಡು ದಿನಗಳ ಹಿಂದೆ ನಿಧನರಾದ ಕಾಲಿವುಡ್ ನ ಹಾಸ್ಯ ನಟ ವಿವೇಕ್ ಅವರ ಕನಸೊಂದನ್ನು ನನಸು ಮಾಡುವುದಾಗಿ ಟಿಆರ್ ಎಸ್ ಸಂಸದ ಸಂತೋಷ್ ಕುಮಾರ್ ಅವರು ಹೇಳಿದ್ದಾರೆ.

ವಿವೇಕ್ ಅವರ ಗುರಿ ಗ್ರೀನ್ ಕಲಾಂ ಯೋಜನೆಯಲ್ಲಿ 1 ಕೋಟಿ ಸಸ್ಯಗಳ್ನು ನೆಡುವುದಾಗಿದ್ದು, ಈಗಾಗಲೇ ಅವರು 32.5 ಲಕ್ಷದವರೆಗೆ ಸಸಿಗಳನ್ನು ನೆಟ್ಟಿದ್ದು, ಉಳಿದದ್ದನ್ನು ಗ್ರೀನ್ ಇಂಡಿಯಾ ಚಾಲೆಂಜ್ ಅಡಿಯಲ್ಲಿ ನೆಟ್ಟು 1 ಕೋಟಿ ಸಸಿಗಳನ್ನು ನೆಡುವ ಈ ಯೋಜನೆಯನ್ನು ಪೂರ್ಣಗೊಳಿಸಿ ವಿವೇಕ್ ಅವರಿಗೆ ಅರ್ಪಿಸುವುದಾಗಿ  ಸಂಸದ ಸಂತೋಷ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಗ್ರೀನ್ ಕಲಾಂ ಯೋಜನೆಯಲ್ಲಿ 1 ಕೋಟಿ ಸಸಿಗಳನ್ನು ನೆಡುವ ವಿವೇಕ್ ಅವರ ಗುರಿಯ ಬಗ್ಗೆ ಪ್ರಧಾನಿ ಮೋದಿ ಅವರು ಸಂತಾಪ ಸಂದೇಶದಲ್ಲಿ ಪರೋಕ್ಷವಾಗಿ ಉಲ್ಲೆಖಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್ ‘ಪುಷ್ಪಾ’ ಚಿತ್ರದ ಆ್ಯಕ್ಷನ್ ಎಪಿಸೋಡ್ ಗಾಗಿ ಖರ್ಚಾದ ಹಣವೆಷ್ಟು ಗೊತ್ತಾ?