Select Your Language

Notifications

webdunia
webdunia
webdunia
webdunia

ಬೇರೆ ಯುವಕನೊಂದಿಗೆ ಮದುವೆಯಾಗಲು ಮುಂದಾದ ಪ್ರೇಯಸಿಗೆ ಪ್ರಿಯಕರ ಮಾಡಿದ್ದೇನು?

ಬೇರೆ ಯುವಕನೊಂದಿಗೆ ಮದುವೆಯಾಗಲು ಮುಂದಾದ ಪ್ರೇಯಸಿಗೆ ಪ್ರಿಯಕರ ಮಾಡಿದ್ದೇನು?
ಚೆನ್ನೈ , ಸೋಮವಾರ, 19 ಏಪ್ರಿಲ್ 2021 (09:23 IST)
ಚೆನ್ನೈ : ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಹಳ್ಳಿಯೊಂದರಲ್ಲಿ ವನ್ನಿಯಾರ್ ಸಮುದಾಯಕ್ಕೆ ಸೇರಿದ 18 ವರ್ಷದ ಯುವತಿಯನ್ನು 21ವರ್ಷದ ದಲಿತ ಪ್ರೇಮಿ ಕತ್ತು ಹಿಸುಕಿ ಕೊಂದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಆರೋಪಿ ಹಾಗೂ ಸಂತ್ರಸ್ತೆ 2 ವರ್ಷಗಳಿಂದ ಸಂಬಂಧದಲ್ಲಿದ್ದರು. ಆದರೆ ಯುವತಿಗೆ ಕುಟುಂಬದವರು ಬೇರೆ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದಾರೆ. ಹಾಗಾಗಿ ಆರೋಪಿ ಯುವಕ ಓಡಿ ಹೋಗಿ ಮದುವೆಯಾಗುವ ಎಂದು ಸಂತ್ರಸ್ತೆಗೆ ತಿಳಿಸಿದ್ದಾನೆ.

ಇದಕ್ಕೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಕೊಪಗೊಂಡ ಆತ ದುಪ್ಪಟದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿ ಸೇತುವೆ ಕೆಳಗೆ ಬಚ್ಚಿಟ್ಟುಕೊಂಡಿದ್ದ ಆರೋಪಿಯನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ 3 ರಿಲೀಸ್ ಗೆ ಇನ್ನಷ್ಟು ದಿನ ಕಾಯಲೇ ಬೇಕು