Select Your Language

Notifications

webdunia
webdunia
webdunia
webdunia

ದರ್ಶನ್ ಹೊಸ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿದ ಜೈಲಾಧಿಕಾರಿಗಳು

Bellary Jail

Sampriya

ಬಳ್ಳಾರಿ , ಭಾನುವಾರ, 15 ಸೆಪ್ಟಂಬರ್ 2024 (14:35 IST)
ಬಳ್ಳಾರಿ: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಅವರು ದಿನಕಳೆಯಲು ಕಷ್ಟಪಡುತ್ತಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಕೈದಿ ವಿಲ್ಸನ್ ಗಾರ್ಡನ್ ನಾಗ ಆಯೋಜಿಸಿದ್ದ ಟೀ ಪಾರ್ಟಿಯಲ್ಲಿ ಭಾಗಿಯಾಗಿದ್ದ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಹೊರಗಡೆ ಐಷರಾಮಿ ಜೀವನ ಮಾಡಿ, ಫಿಟ್‌ನೆಸ್‌ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ದರ್ಶನ್ ಇದೀಗ ಜೈಲಿನಲ್ಲಿ ಫಿಟ್‌ನೆಸ್‌ ಕಾಪಾಡಲು ಸರ್ಕಸ್ ಮಾಡುತ್ತಿದ್ದಾರೆ.

ಬಾಡಿ ಶೇಪ್ ಹಾಳಾಗಬಾರದೆಂದು ದರ್ಶನ್ ಅವರು ಜೈಲಾಧಿಕಾರಿಗಳ ಮುಂದೆ ಬಾಡಿ ಮೇಂಟೆನ್ಸ್ ಪೌಡರ್ ಹಾಗೂ ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟಿದ್ದು, ಜೈಲಾಧಿಕಾರಿಗಳು ಸಾರಾಸಗಟಾಗಿ ಬೇಡಿಕೆ ತಿರಸ್ಕರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇನ್ನೂ ದರ್ಶನ್ ಅವರು ಜೈಲಿನಲ್ಲಿ ತಮ್ಮ ದೇಹದ ಫಿಟ್‌ನೆಸ್ ಬಗ್ಗೆಯೇ ಚಿಂತೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಫ್ಯಾಮಿಲಿ ಮುಖಾಂತರ ವಿಟಮಿನ್ ಪೌಡರ್ ನೀಡುವಂತೆ ಜೈಲು ಸಿಬ್ಬಂದಿ ಬಳಿ ದರ್ಶನ್ ಕೇಳಿಕೊಂಡಿದ್ದಾರೆ. ಆದರೆ ಆದೆಲ್ಲಾ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಅವರು ನಯವಾಗಿ ಅವರ ಕೋರಿಕೆಯನ್ನು ತಿರಸ್ಕರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಮನೆ ಆಟಕ್ಕೆ ಕೌಂಟ್‌ಡೌನ್, ನಮಗೆ ಸುದೀಪ್ ಅಷ್ಟೇ ಮ್ಯಾಟರ್ ಎಂದ ಬಿಗ್‌ಬಾಸ್ ಪ್ರಿಯರು