Select Your Language

Notifications

webdunia
webdunia
webdunia
webdunia

ತೆಲುಗು ನಟ ವಿಷ್ಣು ಮಂಚುಗೆ ಶೂಟಿಂಗ್ ವೇಳೆ ಅವಘಡ: ಗಂಭೀರ ಗಾಯ

manchu manoj
ಹೈದರಾಬಾದ್ , ಸೋಮವಾರ, 30 ಅಕ್ಟೋಬರ್ 2023 (17:13 IST)
ಹೈದರಾಬಾದ್: ತೆಲುಗು ಖ್ಯಾತ ನಟ ವಿಷ್ಣು ಮಂಚುಗೆ ಶೂಟಿಂಗ್ ವೇಳೆ ಅವಘಡವಾಗಿದ್ದು ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

ವಿಷ್ಣು ಮಂಚು ಪೌರಾಣಿಕ ‘ಕಣ್ಣಪ್ಪ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ನ್ಯೂಜಿಲೆಂಡ್ ದೇಶದಲ್ಲಿ ನಡೆಯುತ್ತಿದೆ. ಶೂಟಿಂಗ್ ವೇಳೆ ಡ್ರೋಣ್ ಹೊಡೆದು ವಿಷ್ಣು ಗಾಯಗೊಂಡಿದ್ದಾರೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಣ್ಣಪ್ಪ ಸಿನಿಮಾದಲ್ಲಿ ಕನ್ನಡ ನಟ ಶಿವರಾಜ್ ಕುಮಾರ್ ಸೇರಿದಂತೆ ಬಹುಭಾಷಾ ನಟರು ಭಾಗಿಯಾಗಲಿದ್ದಾರೆ. ಈ ಸಿನಿಮಾ ತಮ್ಮ ಕನಸಿನ ಪ್ರಾಜೆಕ್ಟ್ ಎಂದು ವಿಷ್ಣು ಮಂಚು ಹೇಳಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆ ನಟಿಯ ಅನುಮಾನಾಸ್ಪದ ಸಾವು: ಪೊಲೀಸರ ತನಿಖೆ