Select Your Language

Notifications

webdunia
webdunia
webdunia
webdunia

ಅಂಬಾನಿ ಮದುವೆಯಲ್ಲೂ ಕರಿಮಣಿ ಸರ ಮಾತ್ರ: ಎಷ್ಟು ಸಿಂಪಲ್ ನಮ್ಮ ಸುಧಾಮೂರ್ತಿ ಎಂದ ನೆಟ್ಟಿಗರು

Sudha Murty-Namrata Shirodkar

Krishnaveni K

ಬೆಂಗಳೂರು , ಬುಧವಾರ, 17 ಜುಲೈ 2024 (12:12 IST)
Photo Credit: Instagram
ಬೆಂಗಳೂರು: ಇತ್ತೀಚೆಗೆ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿ ಇನ್ ಫೋಸಿಸ್ ಸಹ ಸಂಸ್ಥಾಪಕಿ, ಸಂಸದೆ, ಸಾಹಿತಿ ಸುಧಾಮೂರ್ತಿ ಕೂಡಾ ಭಾಗಿಯಾಗಿದ್ದರು. ಆದರೆ ಫೋಟೋ ನೋಡಿ ನೆಟ್ಟಿಗರು ನಮ್ಮ ಸುಧಮ್ಮ ಎಷ್ಟು ಸಿಂಪಲ್ ಅಂತಿದ್ದಾರೆ.

ಸುಧಾಮೂರ್ತಿ ಯಾವತ್ತೂ ಸರಳವಾಗಿಯೇ ಇರಲು ಬಯಸುತ್ತಾರೆ. ಅನಂತ್ ಅಂಬಾನಿ ಮದುವೆಗೆ ಎಲ್ಲರೂ ಸಾಕಷ್ಟು ಸ್ಟೈಲಿಶ್ ಡ್ರೆಸ್ ನಲ್ಲಿ, ದುಬಾರಿ ಆಭರಣಗಳನ್ನು ತೊಟ್ಟುಕೊಂಡು ಬಂದವರೇ ಹೆಚ್ಚು. ಆದರೆ ಸುಧಾಮೂರ್ತಿ ಮಾತ್ರ ಅಲ್ಲಿಯೂ ತಮ್ಮ ಎಂದಿನ ಡ್ರೆಸ್ ಕೋಡ್ ನ್ನೇ ಪಾಲಿಸಿದ್ದಾರೆ.

ಎಂದಿನಂತೇ ಸರಳ ಸೀರೆ, ಕುತ್ತಿಗೆಯಲ್ಲಿ ನೆಕ್ಲೇಸ್, ಹಾರಗಳಿಲ್ಲದೇ ಕೇವಲ ಒಂದು ಕರಿಮಣಿ ಸರ, ಮುಡಿಗೆ ಮಲ್ಲಿಗೆ ಮಾಲೆ ಹಾಕಿಕೊಂಡು ಬಂದಿದ್ದರು. ಅವರ ಜೊತೆಗೆ ಸೂಪರ್ ಸ್ಟಾರ್ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಇವರ ಸರಳತೆಯ ಬಗ್ಗೆ ಕೇಳಿದ್ದೆ. ಆದರೆ ಇಂದು ಪ್ರತ್ಯಕ್ಷವಾಗಿ ನೋಡಿದೆ. ಸುಧಮ್ಮನಿಗೆ ನಮ್ಮ ಕುಟುಂಬದ ಮೇಲಿನ ಅಭಿಮಾನ ನೋಡಿ ಖುಷಿಯಾಯಿತು. ಅವರ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಗಿದೆ ಎಂದು ನಮ್ರತಾ ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರೂ ಕಾಮೆಂಟ್ ಮಾಡಿದ್ದು ಅಂಬಾನಿಯ ವೈಭವೋಪೇತ, ಸ್ಟಾರ್ ಗಳೇ ತುಂಬಿರುವ ಮದುವೆಯಲ್ಲೂ ಇಷ್ಟು ಸಿಂಪಲ್ ಆಗಿದ್ದಾರಲ್ಲಾ ಎಂದು ಅಚ್ಚರಿಪಟ್ಟುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿರುವಾಗಲೂ ದರ್ಶನ್ ಗೊಂದು ಸಿಹಿ ಸುದ್ದಿ