Select Your Language

Notifications

webdunia
webdunia
webdunia
webdunia

ಒಟ್ಟಿಗೆ ಬಾಳೋರಿಗೆ ದೇವರು ಅವಕಾಶ ಕೊಡಲ್ಲ, ಅವಕಾಶ ಕೊಟ್ಟವರು ಒಟ್ಟಿಗೆ ಬಾಳಲ್ಲ

Chandan Shetty-Niveditha Gowda-Yuva Rajkumar

Krishnaveni K

ಬೆಂಗಳೂರು , ಮಂಗಳವಾರ, 11 ಜೂನ್ 2024 (16:32 IST)
Photo Credit: Instagram
ಬೆಂಗಳೂರು: ಒಟ್ಟಿಗೆ ಬಾಳುವವರಿಗೆ ದೇವರು ಅವಕಾಶನೇ ಕೊಡಲ್ಲ, ಅವಕಾಶ ಕೊಟ್ಟವರು ಒಟ್ಟಿಗೇ ಬಾಳಲ್ಲ. ಹೀಗಂತ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಟ್ರೋಲ್ ಪೇಜ್ ಗಳು ಮಾಡುತ್ತಿರುವ ಪೋಸ್ಟ್ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಚಂದನ್ ಶೆಟ್ಟಿ-ನಿವೇದಿತಾ ಗೌಡ, ಯುವರಾಜ್ ಕುಮಾರ್-ಶ್ರೀದೇವಿ ವಿಚ್ಛೇದನ ಪ್ರಕರಣ ಭಾರೀ ಸದ್ದು ಮಾಡಿತ್ತು. ಚಂದನ್-ನಿವೇದಿತಾರ ಅಷ್ಟು ಚೆನ್ನಾಗಿದ್ದ ಸಂಸಾರದಲ್ಲಿ ಬಿರುಕು ಮೂಡಿದ್ದು ಅಭಿಮಾನಿಗಳಿಗೆ ತೀರಾ ಬೇಸರವುಂಟು ಮಾಡಿತ್ತು. ಯುವರಾಜ್-ಶ್ರೀದೇವಿ ನಡುವೆ ಅಕ್ರಮ ಸಂಬಂಧದ ಆರೋಪ-ಪ್ರತ್ಯಾರೋಪ ಎದುರಾಗಿತ್ತು.

ಇದು ಅಭಿಮಾನಿಗಳಿಗೆ ಬೇಸರವುಂಟು ಮಾಡಿದೆ. ಅದರ ನಡುವೆ ಕೆಲವು ಟ್ರೋಲ್ ಪೇಜ್ ಗಳು ಒಟ್ಟಿಗೇ ಬಾಳುವ ಅವಕಾಶ ಕೊಟ್ಟರೂ ಇವರು ಒಟ್ಟಿಗೇ ಬಾಳುತ್ತಿಲ್ಲ. ಆದರೆ ಚಿರು ಸರ್ಜಾ-ಮೇಘನಾ ರಾಜ್, ವಿಜಯ್ ರಾಘವೇಂದ್ರ-ಸ್ಪಂದನಾ, ಪುನೀತ್ ರಾಜ್ ಕುಮಾರ್-ಅಶ್ವಿನಿ ಫೋಟೋ ಹಾಕಿ ಇವರು ಒಟ್ಟಿಗೇ ಬಾಳಬೇಕೆಂದರೂ ದೇವರು ಅವಕಾಶ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿರಂಜೀವಿ ಸರ್ಜಾ ಮತ್ತು ಮೇಘನಾ ಪರಸ್ಪರ ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದವರು. ವಿಜಯ್ ರಾಘವೇಂದ್ರ, ಅಶ್ವಿನಿ ಕೂಡಾ ಕತೆಯೂ ಅಷ್ಟೆಯೇ. ಆದರೆ ಅಕಾಲಿಕವಾಗಿ ಇವರು ಮೂವರೂ ತಮ್ಮ ಸಂಗಾತಿಗಳನ್ನು ಕಳೆದುಕೊಂಡರು. ಆದರೆ ಯುವರಾಜ್, ಚಂದನ್ ಶೆಟ್ಟಿ ಜೋಡಿಗೆ ದೇವರು ಅವಕಾಶ ಕೊಟ್ಟರೂ ಒಟ್ಟಿಗೇ ಬಾಳುವ ಯೋಗ ಇವರಿಗಿಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ