Select Your Language

Notifications

webdunia
webdunia
webdunia
webdunia

ಎಲ್ಲರೆದುರೇ ಶಿವರಾಜ್ ಕುಮಾರ್ ಪುತ್ರಿಗೆ ಚಪ್ಪಲಿ ತೊಡಿಸಿದ ಅಳಿಯ!

ಎಲ್ಲರೆದುರೇ ಶಿವರಾಜ್ ಕುಮಾರ್ ಪುತ್ರಿಗೆ ಚಪ್ಪಲಿ ತೊಡಿಸಿದ ಅಳಿಯ!
ಬೆಂಗಳೂರು , ಮಂಗಳವಾರ, 9 ನವೆಂಬರ್ 2021 (16:53 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 11 ನೇ ದಿನದ ಕಾರ್ಯದ ಬಳಿಕ ಇಂದು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಟುಂಬ ವರ್ಗ ಪಾಲ್ಗೊಂಡಿತ್ತು. ಅದರಲ್ಲೂ ವಿಶೇಷವಾಗಿ ಶಿವಣ್ಣನ ಪುತ್ರಿ ನಿರುಪಮಾ ಪತಿ ಡಾ. ದಿಲೀಪ್ ಎಲ್ಲರ ಗಮನ ಸೆಳೆದರು.

ನಿವೇದಿತಾಗೆ ಕಾಲಿಗೆ ಏಟಾಗಿದ್ದು, ನಡೆಯಲು ಕಷ್ಟವಾಗಿದೆ. ಹೀಗಾಗಿ ಮನೆಗೆ ಹೊರಡುವ ವೇಳೆಗೆ ನಿರುಪಮಾಗೆ ಚಪ್ಪಲಿ ಹಾಕುವಾಗ ಕಷ್ಟವಾಗಿತ್ತು. ಈ ವೇಳೆ ಸ್ವತಃ ದಿಲೀಪ್ ಹಿಂದೆ ಮುಂದೆ ಯೋಚಿಸದೇ ಕೆಳಗೆ ಕೂತು ಪತ್ನಿಗೆ ಚಪ್ಪಲಿ ತೊಡಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ತಾವೇ ನಿರುಪಮಾ ಕೈ ಹಿಡಿದು ಕಾರಿನ ಬಳಿ ನಡೆಯುತ್ತಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಇಂಥಾ ಗಂಡ ಅಪರೂಪ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ಅನ್ನಸಂತರ್ಪಣೆ: ಕಣ್ಣೀರಾದ ಅಶ್ವಿನಿ ಪುನೀತ್ ರಾಜ್ ಕುಮಾರ್