Publish Date: Tue, 25 Aug 2020 (10:41 IST)
Updated Date: Tue, 25 Aug 2020 (10:43 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಹಿಂದಿ ಹೇರಿಕೆ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಈ ನಡುವೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭಾಷೆ ಕುರಿತಾದ ಹೋರಾಟಕ್ಕೆ ತಾವು ರೆಡಿ ಎಂದಿದ್ದಾರೆ.
ಅಪ್ಪಾಜಿ ಹೇಳಿದ ಹಾಗೆ ಕಲಿಯೋಕೆ ಕೋಟಿ ಭಾಷೆ. ಆದರೆ ಆಡೋಕೆ ಒಂದೇ ಭಾಷೆ, ಅದು ಕನ್ನಡ. ಮಾತೃಭಾಷೆಯಾಗಿ ಕನ್ನಡಕ್ಕೇ ಆದ್ಯತೆ ನೀಡಬೇಕು. ಭಾಷೆ ಕುರಿತಾದ ಯಾವುದೇ ಹೋರಾಟಕ್ಕೂ ನಾನು ರೆಡಿ ಎಂದಿದ್ದಾರೆ. ಈ ಮೂಲಕ ಕನ್ನಡ ಭಾಷೆಗಾಗಿ ಹೋರಾಟದ ಹಾದಿ ಹಿಡಿಯಲೂ ಸಿದ್ಧ ಎಂದು ಸೂಚಿಸಿದ್ದಾರೆ.