Select Your Language

Notifications

webdunia
webdunia
webdunia
webdunia

ಯುವರಾಜ್ ಕುಮಾರ್-ಸಂತೋಷ್ ಆನಂದ್ ರಾಮ್ ಸಿನಿಮಾಗೆ ತಯಾರಿ ಶುರು

ಯುವರಾಜ್ ಕುಮಾರ್-ಸಂತೋಷ್ ಆನಂದ್ ರಾಮ್ ಸಿನಿಮಾಗೆ ತಯಾರಿ ಶುರು
ಬೆಂಗಳೂರು , ಶುಕ್ರವಾರ, 8 ಏಪ್ರಿಲ್ 2022 (09:16 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಗಾಗಿ ಮಾಡಬೇಕಿದ್ದ ಸಿನಿಮಾವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ದೊಡ್ಮನೆ ಕುಡಿ ಯುವರಾಜ್ ಕುಮಾರ್ ರನ್ನು ನಾಯಕನಾಗಿ ಮಾಡಿ ಸಿನಿಮಾ ಮಾಡಲು ಹೊರಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಈ ಸಿನಿಮಾ ಡಾ.ರಾಜ್ ಕುಮಾರ್ ಜನ್ಮದಿನವಾದ ಏಪ್ರಿಲ್ 24 ರಂದು ಲಾಂಚ್ ಆಗಲಿದೆ ಎಂಬ ಸುದ್ದಿ ಈಗಾಗಲೇ ಹರಿದಾಡುತ್ತಿದೆ.

ಇದೀಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅದಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಇದೇ ವಾರ ಯುವರಾಜ್ ಕುಮಾರ್ ಫೋಟೋ ಶೂಟ್ ನಡೆಯಲಿದೆ ಎಂಬ ಸುದ್ದಿ ಬಂದಿದೆ. ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿರುವ ಸಂತೋಷ್ ಆನಂದ್ ರಾಮ್ ಈ ಬಾರಿ ಯಾವ ರೀತಿ ಕತೆ ಹೇಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಪುನೀತ್ ಗಾಗಿ ಮಾಡಿದ್ದ ಕತೆಯಾಗಿರುವುದರಿಂದ ಯುವರಾಜ್ ಮೇಲೆ ನಿರೀಕ್ಷೆಯೂ ಹೆಚ್ಚಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಯಾನ್ಸ್ ಗೆ ಆರ್ಡರ್ ಕೊಟ್ಟ ದಳಪತಿ ವಿಜಯ್