Select Your Language

Notifications

webdunia
webdunia
webdunia
webdunia

ನಟ ದರ್ಶನ್ ಗೆ ಇಷ್ಟದ ಊಟ ನೀಡಲು ಕ್ಯೂ ನಿಂತಿದ್ದಾರಾ ರೌಡಿಗಳು

Darshan

Krishnaveni K

ಬೆಂಗಳೂರು , ಶನಿವಾರ, 3 ಆಗಸ್ಟ್ 2024 (11:58 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಈಗ ಊಟ ಕೊಡಲು ಜೈಲಿನಲ್ಲಿರುವ ಕುಖ್ಯಾತ ರೌಡಿಗಳು ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಟ ದರ್ಶನ್ ಮಾಂಸಾಹಾರ ಪ್ರಿಯ. ಒಂದು ದಿನವೂ ಮಾಂಸಾಹಾರವಿಲ್ಲದೇ ಊಟ ಮಾಡಿದವರಲ್ಲ. ಆದರೆ ಈಗ ಜೈಲಿನಲ್ಲಿ ಇತರೆ ಕೈದಿಗಳಿಗೆ ನೀಡುವ ಸಪ್ಪೆ ಆಹಾರವನ್ನೇ ಅವರಿಗೂ ನೀಡಲಾಗುತ್ತಿದೆ. ವಾರಕ್ಕೊಂದು ಬಾರಿ ಮಾತ್ರ ಜೈಲಿನ ಮೆನುವಿನಂತೆ ಮಾಂಸಾಹಾರ ನೀಡಲಾಗುತ್ತಿದೆ.

ಆದರೆ ದರ್ಶನ್ ಸೇವೆ ಮಾಡಲು ಜೈಲಿನಲ್ಲಿರುವ ಕುಖ್ಯಾತ ರೌಡಿಗಳು ಸಾಲುಗಟ್ಟಿ ನಿಂತಿದ್ದಾರಂತೆ. ಅವರಿಗೆ ವಿಸಿಟರ್ ಗಳು ನೀಡುವ ಮಾಂಸಾಹಾರವನ್ನು ದರ್ಶನ್ ಗೆ ತಲುಪಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಮಾಂಸಾಹಾರಕ್ಕಾಗಿ ಪರಿತಪಿಸುತ್ತಿರುವ ದರ್ಶನ್ ಗೆ ಜೈಲಿನಲ್ಲಿರುವ ರೌಡಿಗಳೇ ಸಹಾಯ ಮಾಡುತ್ತಿದ್ದಾರಂತೆ.

ಸದ್ಯಕ್ಕೆ ದರ್ಶನ್ ವಿಐಪಿ ಸೆಲ್ ನಲ್ಲಿ ಏಕಾಂಗಿಯಾಗಿದ್ದಾರೆ. ಅವರ ಸೆಲ್ ಪಕ್ಕದಲ್ಲಿ ಕೆಲವು ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದರೂ ಕೋರ್ಟ್ ನಿಂದ ದರ್ಶನ್ ಗೆ ಅನುಮತಿ ಸಿಕ್ಕಿಲ್ಲ. ಇದರ ನಡುವೆ ಆಗಸ್ಟ 14 ರವರೆಗೂ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Mohanlal: ಸೇನಾ ಸಮವಸ್ತ್ರದಲ್ಲಿ ವಯನಾಡಿನಲ್ಲಿ ಕಾರ್ಯಾಚರಣೆಗಿಳಿದೇ ಬಿಟ್ಟ ಸೂಪರ್ ಸ್ಟಾರ್ ಮೋಹನ್ ಲಾಲ್ (Video)