Select Your Language

Notifications

webdunia
webdunia
webdunia
webdunia

ತರುಣ್ ಸುಧೀರ್ ಮದುವೆಗೆ ದರ್ಶನ್ ಕೊಟ್ಟ ಭರವಸೆ ಹುಸಿಯಾಯಿತು

Darshan-Tharun Sudhir

Krishnaveni K

ಬೆಂಗಳೂರು , ಗುರುವಾರ, 1 ಆಗಸ್ಟ್ 2024 (16:14 IST)
ಬೆಂಗಳೂರು: ತಮ್ಮ ಆಪ್ತ, ಸಹೋದರ ಸಮಾನರೆನಿಸಿಕೊಂಡಿರುವ ತರುಣ್ ಸುಧೀರ್ ಮದುವೆ ವಿಚಾರದಲ್ಲಿ ನಟ ದರ್ಶನ್ ಕೊಟ್ಟಿದ್ದ ಭರವಸೆ ಈಗ ಯಾಕೋ ಸುಳ್ಳಾಗುತ್ತಿದೆ. ಇದಕ್ಕೆ ಕಾರಣ ಇಂದು ಕೋರ್ಟ್ ಕೊಟ್ಟ ತೀರ್ಪು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬಂಧನ ಅವಧಿಯನ್ನು ಆಗಸ್ಟ್ 14 ರವರೆಗೆ ವಿಸ್ತರಿಸಿ ಕೋರ್ಟ್ ಇಂದು ಆದೇಶ ನೀಡಿದೆ. ಹೀಗಾಗಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಸದ್ಯಕ್ಕೆ ಬಿಡುಗಡೆಯ ಕನಸು ಕಾಣುವಂತಿಲ್ಲ.

ಇದೇ ತಿಂಗಳು 11 ರಂದು ತರುಣ್ ಮತ್ತು ನಟಿ ಸೋನಲ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರ ಪ್ರೀತಿಗೆ ಮೊದಲು ಸೇತುವೆಯಾಗಿದ್ದೇ ನಟ ದರ್ಶನ್. ಹೀಗಾಗಿ ತಮ್ಮ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ದರ್ಶನ್ ಗೇ ನೀಡಿ ಬಂದಿದ್ದರು ದರ್ಶನ್. ಅವರನ್ನು ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾಗ ಯಾವುದೇ ಕಾರಣಕ್ಕೂ ನಿನ್ನ ಮದುವೆ ಡೇಟ್ ಮುಂದೆ ಹಾಕಬೇಡ. ಆ ದಿನ ನಾನು ಬಂದೇ ಬರುತ್ತೇನೆ ಎಂದಿದ್ದರಂತೆ.

ಆದರೆ ಈಗ ದರ್ಶನ್ ನ್ಯಾಯಾಂಗ ಬಂಧನ ಅವಧಿ ಆಗಸ್ಟ್ 14 ರವರೆಗೆ ಮುಂದುವರಿಸಲಾಗಿದ್ದು ತರುಣ್ ಮದುವೆಗೆ ಬರಬಹುದು ಎಂದು ಕಾದಿದ್ದ ಅಭಿಮಾನಿಗಳೂ ನಿರಾಸೆಯಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ವಿರುದ್ಧ ಪ್ರಬಲ ಸಾಕ್ಷ್ಯಗಳಿದ್ದು ಹೊರಬರುವುದು ಅಷ್ಟು ಸುಲಭವಲ್ಲ. ಆದರೂ ದರ್ಶನ್ ಮಾತು ಕೇಳಿ ಅಭಿಮಾನಿಗಳಲ್ಲೂ ಭರವಸೆ ಮೂಡಿತ್ತು. ಆದರೆ ಆ ನಿರೀಕ್ಷೆಯೀಗ ಸುಳ್ಳಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಗೆ ಜೈಲೇ ಗತಿ: ಪತ್ನಿ ವಿಜಯಲಕ್ಷ್ಮಿ ದೇವಾಲಯ ಸುತ್ತಿದರೂ, ಡಿಸಿಎಂ ಭೇಟಿಯಾದರೂ ನೋ ಯೂಸ್