Publish Date: Fri, 10 Mar 2023 (08:40 IST)
Updated Date: Fri, 10 Mar 2023 (08:51 IST)
ಬೆಂಗಳೂರು: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಇತ್ತೀಚೆಗೆ ಕಾಡಿನ ಜನರ ಕಷ್ಟ ಪರಿಹಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಇದರ ಬೆನ್ನಲ್ಲೇ ರಿಷಬ್ ಬಿಜೆಪಿ ಸೇರ್ತಾರಾ ಎಂಬ ವದಂತಿ ಹುಟ್ಟಿಕೊಂಡಿದೆ. ಕಾಂತಾರ ಬಿಡುಗಡೆ ಸಂದರ್ಭದಲ್ಲಿ ರಿಷಬ್ ನರೇಂದ್ರ ಮೋದಿಯನ್ನು ಹೊಗಳಿ, ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ದು ದೊಡ್ಡ ಸುದ್ದಿಯಾಗಿತ್ತು.
ಇದೀಗ ಸಿಎಂ ಭೇಟಿ ಮಾಡಿದ ಬಳಿಕ ಇಂಥಾ ಸಿಎಂ ಪಡೆದ ನಾವೇ ಧನ್ಯ ಎನಿಸುತ್ತದೆ ಎಂದು ಹೊಗಳಿದ್ದಾರೆ. ಇದರ ಬೆನ್ನಲ್ಲೇ ರಿಷಬ್ ಮುಂದೆ ಬಿಜೆಪಿ ಸೇರಬಹುದು ಎಂಬ ವದಂತಿ ಹುಟ್ಟಿಕೊಂಡಿದೆ. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಿಷಬ್ ನಾನು ರಾಜಕೀಯ ಸೇರುತ್ತಿಲ್ಲ ಎಂದಿದ್ದರು.