Select Your Language

Notifications

webdunia
webdunia
webdunia
webdunia

ನೀನು ಸಖತ್ ಬ್ಯೂಟಿ ಕಣೇ.. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮಾಡಿದ್ದ ಮೆಸೇಜ್ ಡೀಟೈಲ್ಸ್

Pavithra Gowda-Renukaswamy

Krishnaveni K

ಬೆಂಗಳೂರು , ಶುಕ್ರವಾರ, 6 ಸೆಪ್ಟಂಬರ್ 2024 (11:23 IST)
ಬೆಂಗಳೂರು: ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕರೆತಂದು ಬೆಂಗಳೂರಿನಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದೆ ಎಂಬುದು ಆರೋಪವಾಗಿದೆ. ಇದೀಗ ಪವಿತ್ರಾ ಹೆಸರಿನಲ್ಲಿ ಪವನ್ ಮತ್ತು ರೇಣುಕಾಸ್ವಾಮಿ ನಡುವೆ ನಡೆದ ಚ್ಯಾಟಿಂಗ್ ಬಯಲಾಗಿದೆ.

ಮೊದಲು ಇನ್ ಸ್ಟಾಗ್ರಾಂನಲ್ಲಿ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಪವಿತ್ರಾ ಆ ಸಂದೇಶಗಳನ್ನು ಪವನ್ ಗೆ ನೀಡಿ ಆತನ ಜೊತೆ ಸಂಪರ್ಕ ಸಾಧಿಸಲು ಹೇಳಿದ್ದಳು. ಅದರಂತೆ ಪವನ್ ಪವಿತ್ರಾ ಹೆಸರಿನಲ್ಲಿ ಚ್ಯಾಟಿಂಗ್ ಮಾಡುತ್ತಿದ್ದ. ಉಪಾಯವಾಗಿ ರೇಣುಕಾಸ್ವಾಮಿ ವ್ಯಾಟ್ಸಾಪ್ ನಂಬರ್ ಪಡೆದುಕೊಂಡಿದ್ದ.

ಬಳಿಕ ಪವನ್ ತಾನು ಪವಿತ್ರಾ ಗೌಡ ಎಂಬಂತೆ ಚ್ಯಾಟಿಂಗ್ ಮಾಡಿದ್ದ. ಈ ಚ್ಯಾಟಿಂಗ್ ನಲ್ಲಿ ರೇಣುಕಾಸ್ವಾಮಿ ‘ಹಾಯ್ ಕಣೇ. ನೀನು ತುಂಬಾ ಬ್ಯೂಟಿಫುಲ್’ ಎಂದಿದ್ದ. ತನ್ನ ಬಗ್ಗೆ ವಿವರ ನೀಡಿದ್ದ ರೇಣುಕಾಸ್ವಾಮಿಗೆ ‘ನಿನ್ನ ಶಾಪ್ ಫೋಟೋ ಕಳುಹಿಸು’ ಎಂದಿದ್ದ ಪವನ್. ಇದಕ್ಕೆ ರೇಣುಕಾ ಯಾಕೆ ಎಂದು ಕೇಳಿದ್ದ. ‘ನೀನು ಸುಳ್ಳು ಹೇಳ್ತಿದ್ದೀಯಾ ಎಂದು ನೋಡಬೇಕು’ ಎಂದಿದ್ದ. ಕೊನೆಗೆ ರೇಣುಕಾ ಶಾಪ್ ನ ಫೋಟೋ ತೆಗೆದು ಕಳುಹಿಸಿದ್ದ.

ಇದರಿಂದಾಗಿಯೇ ರಾಘವೇಂದ್ರ ಮತ್ತು ಗ್ಯಾಂಗ್ ಗೆ ರೇಣುಕಾಸ್ವಾಮಿ ಪತ್ತೆ ಹಚ್ಚಲು ಸುಲಭವಾಯಿತು. ಈ ರೀತಿ ಪವನ್ ನನ್ನು ಪವಿತ್ರಾ ಎಂದು ತಿಳಿದುಕೊಂಡು ಹಲವು ಅಶ್ಲೀಲ ಸಂದೇಶಗಳನ್ನು ರೇಣುಕಾ ಕಳುಹಿಸಿದ್ದ. ಎಲ್ಲವನ್ನೂ ಇಲ್ಲಿ ಹೇಳಲೂ ಸಾಧ್ಯವಿಲ್ಲ. ಆದರೆ ಈ ಸಂಭಾಷಣೆಯೇ ಆತನಿಗೆ ಮುಳುವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮಗಳು ಟೆನಿಸ್ ಪ್ಲೇಯರ್ ಆಗಬೇಕೆಂದು ಅವಳ ಅಪ್ಪನ ಆಸೆ: ರಾಧಿಕಾ ಕುಮಾರಸ್ವಾಮಿ