Select Your Language

Notifications

webdunia
webdunia
webdunia
webdunia

ನ್ಯೂಸ್ ನವರನ್ನು ಕಂಡರೆ ಉರಿದು ಬೀಳ್ತಿದ್ದ ದರ್ಶನ್ ಗೆ ಈಗ ಟಿವಿ ನೋಡುವ ಹಂಬಲ

Darshan Thoogudeepa

Krishnaveni K

ಬಳ್ಳಾರಿ , ಬುಧವಾರ, 4 ಸೆಪ್ಟಂಬರ್ 2024 (15:13 IST)
ಬಳ್ಳಾರಿ: ಒಂದು ಕಾಲದಲ್ಲಿ ಪತ್ರಕರ್ತರು, ಸುದ್ದಿವಾಹಿನಿಗಳೆಂದರೆ ಉರಿದುಬೀಳುತ್ತಿದ್ದ ನಟ ದರ್ಶನ್ ಗೆ ಈಗ ಜೈಲಿನಲ್ಲಿ ನ್ಯೂಸ್ ನೋಡುವ ಹಂಬಲವಾಗಿದ್ದು, ಟಿವಿ ವ್ಯವಸ್ಥೆ ಮಾಡಿ ಎಂದು ಜೈಲು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರಂತೆ.

ನಿನ್ನೆ ರಾತ್ರಿಯಿಂದ ದರ್ಶನ್ ಟೆನ್ಷನ್ ಹೆಚ್ಚಾಗಿದ್ದು ಸರಿಯಾಗಿ ಊಟ, ನಿದ್ರೆಯೂ ಮಾಡದೇ ಚಡಪಡಿಸುತ್ತಿದ್ದಾರೆ ಎಂದು  ತಿಳಿದುಬಂದಿದೆ. ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ದರ್ಶನ್ ತೀರಾ ಒತ್ತಡಕ್ಕೊಳಗಾಗಿದ್ದಾರೆ.

ಈ ನಡುವೆ ಅವರಿಗೆ ಹೊರಗೆ ಏನು ನಡೆಯುತ್ತದೆ, ಚಾರ್ಜ್ ಶೀಟ್ ಬಗ್ಗೆ ವಿವರ ಗೊತ್ತಾಗಬೇಕಾದರೆ ನ್ಯೂಸ್ ಗಳೇ ಗತಿಯಾಗಿದೆ. ಈ ಕಾರಣಕ್ಕೆ ಟಿವಿ ಹಾಕಿಸಿಕೊಡಿ ಎಂದು ಪದೇ ಪದೇ ಜೈಲು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರಂತೆ. ಇದರ ಜೊತೆಗೆ ಮನೆಯವರ ಜೊತೆ ಫೋನ್ ನಲ್ಲಿ ಮಾತನಾಡಲು ಅವಕಾಶ ಕೊಡಿ ಎಂದೂ ಕೇಳಿಕೊಂಡಿದ್ದಾರೆ.

ಸದ್ಯಕ್ಕೆ ಬಳ್ಳಾರಿ ಜೈಲಿನಲ್ಲಿ ಏಕಾಂಗಿಯಾಗಿರುವ ದರ್ಶನ್ ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ತುಂಬಾ ಒತ್ತಡಕ್ಕೊಳಗಾಗಿದ್ದಾರೆ. ಮೊನ್ನೆಯಷ್ಟೇ ಡಿಐಜಿ ಶೇಷ ಬೇಡಿಕೆಯಿಟ್ಟರೆ ದರ್ಶನ್ ಗೆ ಟಿವಿ ವ್ಯವಸ್ಥೆ ಮಾಡಬಹುದು ಎಂದಿದ್ದರು. ಹೀಗಾಗಿ ಈಗ ದರ್ಶನ್ ಮನವಿಗೆ ಸ್ಪಂದಿಸಿ ಟಿವಿ ಕೊಡುತ್ತಾರಾ ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಪ್‌ ಆರೋಪ ಆಧಾರ ರಹಿತ: ಸಾಬೀತಿಗೆ ಯಾವ ಹಂತಕ್ಕೂ ಹೋಗಲು ಸಿದ್ಧ ಎಂದ ನಿವಿನ್