Select Your Language

Notifications

webdunia
webdunia
webdunia
webdunia

ಸ್ವಲ್ಪ ದಯೆ ತೋರಿ ಬಿಟ್ಟಿದ್ರೂ ಸಾಕಿತ್ತು: ರೇಣುಕಾಸ್ವಾಮಿ ಫೋಟೋ ನೋಡಿ ತಾಯಿ ಕಣ್ಣೀರು

Renukaswamy parents

Krishnaveni K

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (12:13 IST)
ಬೆಂಗಳೂರು: ದರ್ಶನ್ ಆಂಡ್ ಗ್ಯಾಂಗ್ ನಿಂದ ತೀವ್ರವಾಗಿ ಹಲ್ಲೆಗೊಳಗಾದ ಬಳಿಕ ಪ್ರಾಣ ಭಿಕ್ಷೆ ಬೇಡುತ್ತಿರುವ ರೇಣುಕಾಸ್ವಾಮಿ ಫೋಟೋ ನೋಡಿ ಆತನ ಪೋಷಕರು ಕಣ್ಣೀರಿಟ್ಟಿದ್ದಾರೆ.

ದರ್ಶನ್ ಆಂಡ್ ಗ್ಯಾಂಗ್ ಬಟ್ಟೆ ಬಿಚ್ಚಿಸಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದಾಗ ಆತ ಕೈ ಮುಗಿದು ಬಿಟ್ಟು ಬಿಡುವಂತೆ ಅಂಗಲಾಚುತ್ತಾನೆ. ಇನ್ನೊಂದು ಫೋಟೋದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆತ ನೆಲದ ಮೇಲೆ ಬಿದ್ದಿರುವ ಫೋಟೋಗಳಿವೆ. ಈ ಫೋಟೋಗಳನ್ನು ನೋಡಿ ರೇಣುಕಾಸ್ವಾಮಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ನಮ್ಮ ಮಗ ಅಷ್ಟೆಲ್ಲಾ ಅಂಗಲಾಚುವಾಗಲಾದರೂ ಅವರಲ್ಲಿ ಒಬ್ಬರಿಗಾದೂ ಬಿಡೋಣ ಎನ್ನುವ ಮನಸ್ಸಾಗಲಿಲ್ಲವಾ? ಅವರಿಗೆ ಯಾರಿಗೂ ಮನುಷ್ಯತ್ವವೇ ಇಲ್ವಾ? ಇಂತಹ ಕ್ರೂರಿಗಳಿಗೆ ಕಾನೂನು ಮೂಲಕ ಎಷ್ಟು ಸಾಧ್ಯವೋ ಅಷ್ಟು ಕಠಿಣ ಶಿಕ್ಷೆಯಾಗಬೇಕು ಎಂದು ರೇಣುಕಾಸ್ವಾಮಿ ತಾಯಿ ಹೇಳಿದ್ದಾರೆ.ಸ್ವಲ್ಪ ದಯೆ ತೋರಿ ಬಿಟ್ಟಿದ್ದರೂ ನಾವು ಹೇಗೋ ಜೀವನಪರ್ಯಂತ ನೋಡಿಕೊಳ್ಳುತ್ತಿದ್ದೆವು. 

ಇನ್ನು, ನನ್ನ ಮಗನ ಸಾವಿನ ಬಳಿಕ ನಾವು ಪ್ರತಿನಿತ್ಯ ಜೀವಂತ ನರಕ ಅನುಭವಿಸುತ್ತಿದ್ದೇವೆ. ಈ ಫೋಟೋ ನೋಡಿದ ಮೇಲಂತೂ ನಮ್ಮ ದುಃಖ ಇನ್ನಷ್ಟು ಹೆಚ್ಚಾಗಿದೆ. ನಮ್ಮ ಮಗ ಕೊನೆ ಕ್ಷಣದಲ್ಲಿ ಎಷ್ಟು ನೋವು ಅನುಭವಿಸಿರಬಹುದು. ಏನೆಲ್ಲಾ ಬೇಡಿಕೊಂಡಿರಬಹುದು ಎಂದು ನೆನೆಸಿಕೊಂಡರೆ ಜೀವಂತ ಹೆಣವಾಗಿ ಬದುಕುತ್ತಿದ್ದೇವೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಒಬ್ಬೊಬ್ಬರೇ ನಟಿಯರಿಂದ ಹೇಳಿಕೆ ಶುರು