Select Your Language

Notifications

webdunia
webdunia
webdunia
webdunia

ಚಾರ್ಜ್ ಶೀಟ್ ಬೆನ್ನಲ್ಲೇ ಗಂಡ ದರ್ಶನ್ ನೋಡಲು ಓಡೋಡಿ ಬಂದ ವಿಜಯಲಕ್ಷ್ಮಿ

Vijayalakahmi Darshan

Krishnaveni K

ಬಳ್ಳಾರಿ , ಗುರುವಾರ, 5 ಸೆಪ್ಟಂಬರ್ 2024 (14:12 IST)
Photo Credit: Instagram
ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಇಂದು ಪತಿ ದರ್ಶನ್ ರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ ಬಂದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಜೈಲಿಗೆ ದರ್ಶನ್ ಶಿಫ್ಟ್ ಆದ ಬಳಿಕ ವಿಜಯಲಕ್ಷ್ಮಿ ಒಮ್ಮೆ ಅವರನ್ನು ಭೇಟಿ ಮಾಡಿದ್ದರು. ಈಗ ಎರಡನೇ ಬಾರಿಗೆ ಪತಿಯ ಭೇಟಿಗೆ ವಿಜಯಲಕ್ಷ್ಮಿ ಬಳ್ಳಾರಿಗೆ ಬಂದಿದ್ದಾರೆ. ನಿನ್ನೆಯಷ್ಟೇ ಕೋರ್ಟ್ ಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.

ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬಳಿಕ ದರ್ಶನ್ ತೀವ್ರ ಒತ್ತಡಕ್ಕೊಳಗಾಗಿದ್ದರು. ಅವರ ಆರೋಗ್ಯ ನಾರ್ಮಲ್ ಆಗಿಯೇ ಇದೆ ಎಂದು ತನಿಖೆಯಿಂದ ಗೊತ್ತಾಗಿತ್ತು. ಚಾರ್ಜ್ ಶೀಟ್ ನಲ್ಲಿ ಎ1 ಆರೋಪಿಯಾಗಬಹುದೇನೋ ಆತಂಕ ದರ್ಶನ್ ಗಿತ್ತು. ಹೀಗಾಗಿ ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಪತ್ನಿಗೆ ಫೋನ್ ಮಾಡಿ ಮಾತನಾಡಿದ್ದರು. ಆ ಬಳಿಕ ಕೊಂಚ ಅವರು ಸಮಾಧಾನಗೊಂಡಿದ್ದರು.

ಹಾಗಿದ್ದರೂ ಇಂದು ಸ್ವತಃ ವಿಜಯಲಕ್ಷ್ಮಿಯೇ ಜೈಲಿಗೆ ಬಂದು ಪತಿಯನ್ನು ಭೇಟಿ ಮಾಡುತ್ತಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ವಿಜಯಲಕ್ಷ್ಮಿ ಲಾಯರ್ ಬಳಿ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಮುಂದಿನ ಹೆಜ್ಜೆಗಳೇನು ಎಂಬ ಬಗ್ಗೆ ಇಂದು ಪತಿಯ ಜೊತೆ ಚರ್ಚೆ ಮಾಡಲು ವಿಜಯಲಕ್ಷ್ಮಿ ಬರುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊರ್ಕಿ ಸಿನಿಮಾದ ನಾಯಕಿ ಪ್ರಣಿತಾ ಸುಭಾಷ್‌ಗೆ ಗಂಡು ಮಗು ಜನನ