Select Your Language

Notifications

webdunia
webdunia
webdunia
webdunia

ದರ್ಶನ್ ಗಾಗಿ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳಲ್ಲ ಎಂದ ರಕ್ಷಕ್ ಬುಲೆಟ್

Rakshak Bullet

Krishnaveni K

ಬೆಂಗಳೂರು , ಸೋಮವಾರ, 17 ಜೂನ್ 2024 (13:15 IST)
Photo Credit: Instagram
ಬೆಂಗಳೂರು: ಬಿಗ್ ಬಾಸ್ ನಿಂದ ಖ್ಯಾತರಾದ, ಬುಲೆಟ್ ಪ್ರಕಾಶ್ ಪುತ್ರ, ನಟ ರಕ್ಷಕ್ ಬುಲೆಟ್ ಈಗ ದರ್ಶನ್ ಗಾಗಿ ತಮ್ಮ ಹುಟ್ಟುಹಬ್ಬವನ್ನೇ ಆಚರಿಸದಿರಲು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು ಹತ್ತಿರದಲ್ಲಿರುವವರು ಕಷ್ಟದಲ್ಲಿದ್ದಾಗ ಬರ್ತ್ ಡೇ ಆಚರಿಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ನೇರವಾಗಿ ದರ್ಶನ್ ಹೆಸರು ಹೇಳದೇ ಇದ್ದರೂ ಅವರು ಅವರ ಕುರಿತಾಗಿಯೇ ಈ ಮಾತು ಹೇಳಿದ್ದಾರೆ ಎಂಬುದು ಅರ್ಥಮಾಡಿಕೊಳ್ಳಬಹುದಾಗಿದೆ.

ರಕ್ಷಕ್ ಬುಲೆಟ್ ಕೂಡಾ ದರ್ಶನ್ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದರು. ಬುಲೆಟ್ ಪ್ರಕಾಶ್ ಮತ್ತು ದರ್ಶನ್ ಉತ್ತಮ ಸ್ನೇಹಿತರಾಗಿದ್ದರು. ಬುಲೆಟ್ ಪ್ರಕಾಶ್ ತೀರಿಕೊಂಡಾಗ ದರ್ಶನ್ ಅವರ ಕುಟುಂಬಕ್ಕೆ ಸಾಕಷ್ಟು ಸಹಾಯ ಮಾಡಿದ್ದರು. ಇದಾದ ಬಳಿಕ ದರ್ಶನ್ ಜೊತೆಗೆ ರಕ್ಷಕ್ ಸಂಪರ್ಕ ಹೆಚ್ಚಾಗಿತ್ತು.

ಜೂನ್ 21 ರಂದು ರಕ್ಷಕ್ ಹುಟ್ಟುಹಬ್ಬವಿದೆ. ಈ ದಿನ ಅವರ ಹೊಸ ಸಿನಿಮಾ ಘೋಷಣೆಯಾಗುವ ಸಾಧ್ಯತೆಯಿದೆ. ಆದರೆ ದರ್ಶನ್ ಗಾಗಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸದೇ ಇರಲು ತೀರ್ಮಾನಿಸಿದ್ದಾರೆ. ಸದ್ಯಕ್ಕೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಕೇಸ್ ನಲ್ಲಿ ಕೊನೆಗೂ ತಗ್ಲಾಕೊಂಡ ಆಪ್ತ ನಟ ಚಿಕ್ಕಣ್ಣ