Select Your Language

Notifications

webdunia
webdunia
webdunia
webdunia

ದರ್ಶನ್ ಕೇಸ್: ರೇಣುಕಾಸ್ವಾಮಿಗೆ ಶಾಕ್ ಟ್ರೀಟ್ ಮೆಂಟ್ ಕೊಟ್ಟ ಆರೋಪಿ ಅರೆಸ್ಟ್

Arrest

Krishnaveni K

ಬೆಂಗಳೂರು , ಸೋಮವಾರ, 17 ಜೂನ್ 2024 (10:37 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕ್ ಟ್ರೀಟ್ ಮೆಂಟ್ ಕೊಟ್ಟು ಚಿತ್ರಹಿಂಸೆ ಕೊಟ್ಟಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ 9 ನೇ ಆರೋಪಿಯಾಗಿದ್ದ ರಾಜು ಇದುವರೆಗೆ ತಲೆಮರೆಸಿಕೊಂಡಿದ್ದ. ಈತನೇ ರೇಣುಕಾಸ್ವಾಮಿಗೆ ಶಾಕ್ ಟ್ರೀಟ್ ಮೆಂಟ್ ಕೊಟ್ಟ ಪ್ರಮುಖ ಆರೋಪಿ. ಆತನನ್ನು ಈಗ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಾಪಿ ಮೆಗ್ಗರ್ ಮೆಷಿನ್ ಬಳಸಿ ರೇಣುಕಾಸ್ವಾಮಿಗೆ ಶಾಕ್ ಟ್ರೀಟ್ ಮೆಂಟ್ ಕೊಟ್ಟಿದ್ದ.

ಇದರೊಂದಿಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಸಂಖ್ಯೆ 19 ಕ್ಕೇರಿದೆ. ಘಟನೆ ನಡೆದ ದಿನ ಈತನನ್ನು ನಂದೀಶ್ ಶೆಡ್ ಗೆ ಕರೆತಂದಿದ್ದ. ಕೇಬಲ್ ಕೆಲಸ ಮಾಡಿಕೊಂಡಿದ್ದ ಈತ ನಂದೀಶ್ ಜೊತೆ ಕೆಲಸ ಮಾಡುತ್ತಿದ್ದ. ಅಂದು ಎಲೆಕ್ಟ್ರಿಕಲ್ ಮೆಗ್ಗರ್ ಮೆಷಿನ್ ತರಿಸಿದ್ದು ಇದೇ ಆರೋಪಿಗಳು.

ರಾಜು ಅಲಿಯಾಸ್ ಧನರಾಜ್ ಮಂಡ್ಯ ಮೂಲದವನಾಗಿದ್ದಾನೆ. ಘಟನೆ ನಡೆದ ಬಳಿಕ ಇದುವರೆಗೆ ಆತ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಳಿಕ ಆತನ ಬಳಿಯಿಂದ ಮೆಗ್ಗರ್ ಮೆಷಿನ್ ನ್ನೂ ವಶಕ್ಕೆ ಪಡೆಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಅಧಿಕಾರಕ್ಕೆ ಬಂದರೆ ಪೆಟ್ರೋಲ್ ದರ ಏರಿಸಲ್ಲ ಎಂದಿದ್ದ ಸಿದ್ದರಾಮಯ್ಯ ಇಂದು ಮಾತು ಮರೆತರು