Select Your Language

Notifications

webdunia
webdunia
webdunia
webdunia

ದರ್ಶನ್ ಕೇಸ್ ನಲ್ಲಿ ಕೊನೆಗೂ ತಗ್ಲಾಕೊಂಡ ಆಪ್ತ ನಟ ಚಿಕ್ಕಣ್ಣ

Chikkanna

Krishnaveni K

ಬೆಂಗಳೂರು , ಸೋಮವಾರ, 17 ಜೂನ್ 2024 (12:23 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಈಗ ನಟ ದರ್ಶನ್ ಗೆ ಆಪ್ತರಾಗಿದ್ದವರಿಗೂ ಕಂಟಕ ಶುರುವಾಗಿದೆ. ದರ್ಶನ್ ಆತ್ಮೀಯ ಬಳಗದಲ್ಲಿದ್ದ ನಟ ಚಿಕ್ಕಣ್ಣಗೂ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದಾರೆ.

ಅಷ್ಟಕ್ಕೂ ಚಿಕ್ಕಣ್ಣ ಅಂದು ಶೆಡ್ ನಲ್ಲಿರಲಿಲ್ಲ. ಆದರೂ ಅವರಿಗೆ ಯಾಕೆ ನೋಟಿಸ್ ನೀಡಲಾಗಿದೆ ಎಂಬ ಕುತೂಹಲ ನಿಮಗಿರಬಹುದು. ಯಾಕೆಂದರೆ ಘಟನೆ ನಡೆದ ದಿನ ದರ್ಶನ್ ಶೆಡ್ ಗೆ ತೆರಳುವ ಮುನ್ನ ತಮ್ಮ ಆತ್ಮೀಯರೊಂದಿಗೆ ರೆಸ್ಟೋರೆಂಟ್ ಒಂದರಲ್ಲಿ ಪಾರ್ಟಿ ಮಾಡಿದ್ದರು.

ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡಾ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಈಗ ಚಿಕ್ಕಣ್ಣರಿಂದ ವಿವರಣೆ ಪಡೆಯಲು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಘಟನೆ ಬಗ್ಗೆ ದರ್ಶನ್ ತಮ್ಮ ಆಪ್ತನ ಜೊತೆ ಹಂಚಿಕೊಂಡಿರಬಹುದೇ ಎಂದು ಪೊಲೀಸರು ತಿಳಿದುಕೊಳ್ಳಲಿದ್ದಾರೆ.

ನಟ ಚಿಕ್ಕಣ್ಣ ಬಹಳ ಸಮಯದಿಂದಲೂ ದರ್ಶನ್ ಗೆ ಆತ್ಮೀಯರಾಗಿದ್ದಾರೆ. ಆಗಾಗ ದರ್ಶನ್ ಫಾರ್ಮ್ ಹೌಸ್ ನಲ್ಲಿ ಅವರ ಜೊತೆ ಕಾಣಿಸಿಕೊಳ್ಳುತ್ತಾರೆ. ದರ್ಶನ್ ಪ್ರೇರಣೆಯಿಂದ ತಮ್ಮ ಊರಿನಲ್ಲಿ ತಾವೂ ಒಂದು ಫಾರ್ಮ್ ಹೌಸ್ ಮಾಡಿಕೊಂಡಿದ್ದಾರೆ. ಈಗ ಈ ಕೇಸ್ ನಲ್ಲಿ ಅವರೂ ತಗ್ಲಾಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮ್ಯಾಕ್ಸ್ ಸಿನಿಮಾ ರಿಲೀಸ್ ಯಾವಾಗ ಎಂದು ಬಹಿರಂಗಪಡಿಸಿದ ಕಿಚ್ಚ ಸುದೀಪ್