Publish Date: Tue, 11 Jun 2019 (09:40 IST)
Updated Date: Tue, 11 Jun 2019 (09:42 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಈಗ ಸಿನಿಮಾದಿಂದ ರಾಜಕೀಯದವರೆಗೂ ಕಾಲಿಟ್ಟಿದ್ದಾರೆ. ಈಗ ಅಭಿಮಾನಿಗಳ ಆರಾಧ್ಯ ದೈವ ಎನಿಸಿಕೊಂಡಿರುವ ರಜನಿ ಬಗ್ಗೆ ಶಾಲೆ ಮಕ್ಕಳಿಗೆ ಪಠ್ಯದಲ್ಲಿ ಮಾಹಿತಿ ನೀಡಲಾಗಿದೆ.
ತಮಿಳುನಾಡಿನಲ್ಲಿ ಐದನೇ ತರಗತಿಯ ವಿದ್ಯಾರ್ಥಿಗಳ ಪಾಠ ಪುಸ್ತಕದಲ್ಲಿ ರಜನೀಕಾಂತ್ ಬಗ್ಗೆ ಪಾಠವಿದೆ. ರಜನಿ ಸಿನಿಮಾ, ರಾಜಕೀಯ ಮತ್ತು ಕ್ರೀಡೆ ಬಗ್ಗೆ ಇರುವ ಆಸಕ್ತಿ ಕುರಿತಾಗಿ ವಿವರಣೆ ನೀಡಲಾಗಿದೆ.
ಬಸ್ ಕಂಡಕ್ಟರ್ ಆಗಿದ್ದ ರಜನಿ ಬಳಿಕ ಸಿನಿಮಾ ರಂಗಕ್ಕೆ ಪ್ರವೇಶಿಸಿ ಮಿಂಚಿ ಲಕ್ಷಾಂತರ ಮಂದಿಯ ಆರಾಧ್ಯ ದೈವವಾಗಿದ್ದು ಒಂದು ಸಾಧನೆಯೇ ಸರಿ. ಈ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ರಜನಿ ಜೀವನ ಸ್ಪೂರ್ತಿಯಾಗಬಹುದು.