Webdunia - Bharat's app for daily news and videos

Install App

ವಂಚಕ ಯುವರಾಜ್ ಜೊತೆಗೆ ರಾಧಿಕಾ ಕುಮಾರಸ್ವಾಮಿ ಹಣಕಾಸಿನ ವ್ಯವಹಾರ

Webdunia
ಬುಧವಾರ, 6 ಜನವರಿ 2021 (17:25 IST)
ಬೆಂಗಳೂರು: ಪ್ರಭಾವಿಗಳೊಂದಿಗೆ ಗುರುತಿಸಿಕೊಂಡು ಗಣ್ಯರಿಗೆ ವಂಚಿಸುತ್ತಿದ್ದ ಯುವರಾಜ್ ಎಂಬಾತ ಕೆಲವು ದಿನಗಳ ಹಿಂದೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಈತ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಜೊತೆಗಿನ ಹಣಕಾಸಿನ ವ್ಯವಹಾರ ಈಗ ಬಯಲಾಗಿದೆ. ಈ ಸಂಬಂಧ ನಟಿ ರಾಧಿಕಾ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.


ಯುವರಾಜ್ ನಿಂದ ರಾಧಿಕಾ ಖಾತೆಗೆ ಒಂದೂವರೆ ಕೋಟಿ ರೂ. ವರ್ಗಾವಣೆಯಾಗಿದೆ ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಧಿಕಾ ಯುವರಾಜ್ ನನ್ನ ಖಾತೆಗೆ ಹಣ ವರ್ಗಾಯಿಸಿರುವುದು ನಿಜ. ಆದರೆ ಒಂದೂವರೆ ಕೋಟಿಯಲ್ಲ, 15 ಲಕ್ಷ ರೂ. ಅದೂ ಸಿನಿಮಾವೊಂದರ ನಿಮಿತ್ತ. ಯುವರಾಜ್ ಪತ್ನಿ ನಿರ್ಮಾಪಕಿ. ಸಿನಿಮಾ ಮಾಡುವ ಸಂಬಂಧ ನನಗೆ ಹಣ ನೀಡಿದ್ದರು. ಇನ್ನೊಬ್ಬ ವ್ಯಕ್ತಿಯ ಖಾತೆಯಿಂದ 60 ಲಕ್ಷ ರೂ. ವರ್ಗಾಯಿಸಿದ್ದರು. ನನಗೆ ಅವರು ಮೊದಲಿನಿಂದಲೂ ಪರಿಚಯವಿತ್ತು. ಹಾಗಾಗಿ ಸಿನಿಮಾ ವಿಚಾರವಾಗಿ ಎಂದು ಸುಮ್ಮನಿದ್ದೆ. ಇದೀಗ ಅವರ ಹಣವನ್ನೆಲ್ಲಾ ಅವರಿಗೇ ವಾಪಸ್ ಮಾಡ್ತೀನಿ. ನನ್ನ ತಂದೆಯ ಕಾಲದಿಂದಲೂ ಅವರ ಪರಿಚಯವಿತ್ತು. ಹೀಗಾಗಿ ಅವರನ್ನು ತುಂಬಾ ನಂಬಿದ್ದೆ. ಈಗ ನನಗೆ ಮೋಸವಾಗಿದೆ’ ಎಂದು ರಾಧಿಕಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ದೂರು ಬೆನ್ನಲ್ಲೇ ಎಸ್‌ ನಾರಾಯಣ ಕಮಿಷನರ್‌ ದೂರು

ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ಮುಂದಿನ ಸುದ್ದಿ
Show comments