Select Your Language

Notifications

webdunia
webdunia
webdunia
webdunia

ಪ್ರೇಕ್ಷಕರಿಗೆ ನಿರಾಸೆ ಮಾಡಿದ ಪ್ರಭಾಸ್ ರಾಧೇ ಶ್ಯಾಮ್

ಪ್ರೇಕ್ಷಕರಿಗೆ ನಿರಾಸೆ ಮಾಡಿದ ಪ್ರಭಾಸ್ ರಾಧೇ ಶ್ಯಾಮ್
ಹೈದರಾಬಾದ್ , ಶನಿವಾರ, 12 ಮಾರ್ಚ್ 2022 (09:55 IST)
ಹೈದರಾಬಾದ್: ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಗೆ ಸಾಹೋ ಸಿನಿಮಾ ಕೈ ಹಿಡಿಯಲಿಲ್ಲ. ಆದರೆ ಈಗ ರಾಧೇ ಶ್ಯಾಮ್ ಮೇಲೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ ಈಗ ಆ ಸಿನಿಮಾವೂ ನಿರೀಕ್ಷಿಸಿದ ಮಟ್ಟಿಗೆ ಯಶಸ್ಸು ಕಾಣಲ್ಲ ಎನ್ನಲಾಗುತ್ತಿದೆ.

ಕಾರಣ ಸಿನಿಮಾ ಕತೆ. ಈ ಮೊದಲು ತೆಲುಗಿನಲ್ಲಿ ಮಹೇಶ್ ಬಾಬು ಅಭಿನಯದಲ್ಲಿ ಮುರಾರಿ ಎನ್ನುವ ಸಿನಿಮಾ ಬಂದಿತ್ತು. ಅದೇ ಸಿನಿಮಾದ ಎಳೆಯಿಟ್ಟುಕೊಂಡು ರಾಧೇ ಶ್ಯಾಮ್ ಕತೆ ಹೆಣೆಯಲಾಗಿದೆ. ಇದು ಬೋರಿಂಗ್ ಆಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಈ ಸಿನಿಮಾಗೆ 300 ಕೋಟಿ ಬಜೆಟ್ ಆಗಿತ್ತು. ಆದರೆ ಈಗ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿದರೆ ಈ ಸಿನಿಮಾ ಅಷ್ಟು ಗಳಿಕೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ನೆಪದಲ್ಲಾದ್ರೂ ಒಂದಾಗಲಿ ದರ್ಶನ್-ಸುದೀಪ್: ಫ್ಯಾನ್ಸ್ ಆಗ್ರಹ