Select Your Language

Notifications

webdunia
webdunia
webdunia
webdunia

ಅಪ್ಪು ನೆಪದಲ್ಲಾದ್ರೂ ಒಂದಾಗಲಿ ದರ್ಶನ್-ಸುದೀಪ್: ಫ್ಯಾನ್ಸ್ ಆಗ್ರಹ

ಅಪ್ಪು ನೆಪದಲ್ಲಾದ್ರೂ ಒಂದಾಗಲಿ ದರ್ಶನ್-ಸುದೀಪ್: ಫ್ಯಾನ್ಸ್ ಆಗ್ರಹ
ಬೆಂಗಳೂರು , ಶನಿವಾರ, 12 ಮಾರ್ಚ್ 2022 (09:15 IST)
ಬೆಂಗಳೂರು: ಬಹಳ ಸಮಯದಿಂದ ದೂರ ದೂರವೇ ಇರುವ ಕಿಚ್ಚ ಸುದೀಪ್-ದರ್ಶನ್ ಪುನೀತ್ ರಾಜ್ ಕುಮಾರ್ ನೆಪದಲ್ಲಿ ಒಂದಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಹಾಡು ಸುದೀಪ್ ಕೈಯಲ್ಲಿ ಲಾಂಚ್ ಆಗಿದೆ. ಇನ್ನು, ಜೇಮ್ಸ್ ಪ್ರಿ ರಿಲೀಸ್ ಈವೆಂಟ್ ಅದ್ಧೂರಿಯಾಗಿ ನಡೆಯಲಿದ್ದು, ಅದಕ್ಕೆ ಚಿತ್ರರಂಗದ ಘಟಾನುಘಟಿಗಳು ಆಗಮಿಸಲಿದ್ದಾರೆ ಎಂಬ ಸುದ್ದಿಯಿದೆ.

ಈ ಕಾರ್ಯಕ್ರದ ವೇದಿಕೆಯಲ್ಲಾದರೂ ಕಿಚ್ಚ-ದಚ್ಚು ಒಂದಾಗಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಇಬ್ಬರ ನಡುವಿನ ಶೀತಲ ಸಮರದಿಂದಾಗಿ ಒಬ್ಬರು ಬರುವ ವೇದಿಕೆಗೆ ಮತ್ತೊಬ್ಬರು ಬರಲ್ಲ. ಆದರೆ ಅಪ್ಪು ನೆಪದಲ್ಲಾದರೂ ಈ ವೈಮನಸ್ಯ ಕೊನೆಯಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೇಮ್ಸ್ ಹಾಡಿನ ಮೂಲಕ ಸೈನಿಕರಿಗೆ ಸಲಾಂ