Select Your Language

Notifications

webdunia
webdunia
webdunia
webdunia

ಆರ್ ಜಿವಿ ಕಚೇರಿಗೆ ನುಗ್ಗಿ ದಾಳಿ ನಡೆಸಿದ ಪವನ್ ಕಲ್ಯಾಣ ಅಭಿಮಾನಿಗಳು

ಆರ್ ಜಿವಿ ಕಚೇರಿಗೆ ನುಗ್ಗಿ ದಾಳಿ ನಡೆಸಿದ ಪವನ್ ಕಲ್ಯಾಣ ಅಭಿಮಾನಿಗಳು
ಹೈದರಾಬಾದ್ , ಶುಕ್ರವಾರ, 24 ಜುಲೈ 2020 (12:38 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ, ರಾಜಕೀಯ ನಾಯಕ ಪವನ್ ಕಲ್ಯಾಣ  ಅಭಿಮಾನಿಗಳು ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ  ಕಚೇರಿಗೆ ನುಗ್ಗಿ ದಾಳಿ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಪವನ್ ಕಲ್ಯಾಣ ಬಗ್ಗೆ ‘ಪವರ್ ಸ್ಟಾರ್’ ಎಂಬ ಸಿನಿಮಾ ನಿರ್ಮಿಸಿ ಅದನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಮೊದಲಿನಿಂದಲೂ ಪವನ್ ಕಲ್ಯಾಣ ಅವರ ಅಭಿಮಾನಿಗಳು ವಿರೋಧ ವ್ಯಕ್ತಪಡಿಸುತ್ತಿದ್ದರು. ಆದರೆ ಇದೀಗ ರಾಮ್ ಗೋಪಾಲ್ ವರ್ಮಾ ಅವರ ಹೈದರಾಬಾ್ ನಲ್ಲಿರುವ ಕಚೇರಿಗೆ ನುಗ್ಗಿ ಅಲ್ಲಿದ್ದವರ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಅಲ್ಲದೇ ಈ ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ವರ್ಮಾ, ಕಚೇರಿಗೆ ದಾಳಿ ಮಾಡಿದ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಮುತ್ತಿಡಬೇಕೆನಿಸುತ್ತದೆ. ಯಾಕೆಂದರೆ ಇದರಿಂದ ಪವರ್ ಸ್ಟಾರ್ ಸಿನಿಮಾಕ್ಕೆ ಇನ್ನಷ್ಟು ಪ್ರಚಾರ ಸಿಕ್ಕಂತಾಯಿತು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಾರ್ಮ್ ಹೌಸ್ ಗೆ ತೆರಳಿದ್ದ ರಜನೀಕಾಂತ್ ಇ-ಪಾಸ್ ಪಡೆದಿದ್ದಾರೆಯೇ? ನೆಟ್ಟಿಗರಿಂದ ಅನುಮಾನ