Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು , ಮಂಗಳವಾರ, 30 ಜುಲೈ 2019 (10:03 IST)
ಬೆಂಗಳೂರು: ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ನಿಖಿಲ್ ಕುಮಾರಸ್ವಾಮಿ ಮಾತ್ರ ಚಿತ್ರದ ಯಾವುದೇ ಪ್ರಮೋಷನ್, ಅಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಇರುವುದು ದರ್ಶನ್ ಜತೆಗಿನ ಮನಸ್ತಾಪ ಕಾರಣವೇ ಎಂಬ ವದಂತಿಗಳು ಹಬ್ಬಿತ್ತು.


ಚಿತ್ರ ಬಿಡುಗಡೆಗೆ ಎರಡು ವಾರ ಮಾತ್ರವೇ ಬಾಕಿಯಿದ್ದು, ಇನ್ನೂ ನಿಖಿಲ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಕೂಡಾ ಮಾಡಿರಲಿಲ್ಲ. ನಿನ್ನೆಯಿಂದಷ್ಟೇ ಡಬ್ಬಿಂಗ್ ಶುರು ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ.

ನಾನು ಚುನಾವಣೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ಡಬ್ಬಿಂಗ್ ಮಾಡಿಲಿಲ್ಲ. ಈಗ ಸ್ವಲ್ಪ ಬಿಡುವಾಗಿದ್ದೇನೆ. ಇನ್ನು, ದರ್ಶನ್ ಜತೆಗೆ ನನಗೆ ಯಾವುದೇ ಮನಸ್ತಾಪಗಳಿಲ್ಲ. ರಾಜಕೀಯದಲ್ಲಿ ಬ್ಯುಸಿ ಇದ್ದಿದ್ದರಿಂದ ಪ್ರಮೋಷನ್ ಗೆ ಬರಲಾಗಲಿಲ್ಲ. ದರ್ಶನ್ ಬಹುದೊಡ್ಡ ನಟರು. ಅವರ ಜತೆಗೆ ನನಗೆ ಹೆಚ್ಚು ಕಾಂಬಿನೇಷನ್ ಸೀನ್ ಗಳಿರಲಿಲ್ಲ. ಹೀಗಾಗಿ ಅವರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ ಸಿಕ್ಕಿರಲಿಲ್ಲ. ದರ್ಶನ್ ಆಗಲಿ, ನಿರ್ಮಾಪಕ ಮುನಿರತ್ನ ಜತೆಗಾಗಲೀ ನನಗೆ ಮನಸ್ತಾಪಗಳಿಲ್ಲ. ಅದೆಲ್ಲಾ ಸುಳ್ಳು ಸುದ್ದಿ’ ಎಂದು ನಿಖಿಲ್ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಚಲನಚಿತ್ರ ಕಪ್ ದಿನಾಂಕ ಘೋಷಿಸಿದ ಕಿಚ್ಚ ಸುದೀಪ್