Select Your Language

Notifications

webdunia
webdunia
webdunia
webdunia

ಮಗನ ವಿಚ್ಛೇದನ ಕುರಿತು ಮೊದಲ ಬಾರಿಗೆ ಮೌನ ಮುರಿದ ನಾಗಾರ್ಜುನ

ಮಗನ ವಿಚ್ಛೇದನ ಕುರಿತು ಮೊದಲ ಬಾರಿಗೆ ಮೌನ ಮುರಿದ ನಾಗಾರ್ಜುನ
ಹೈದರಾಬಾದ್ , ಶುಕ್ರವಾರ, 28 ಜನವರಿ 2022 (08:40 IST)
ಹೈದರಾಬಾದ್: ಮಗ-ಸೊಸೆ ವಿಚ್ಛೇದನದ ಕುರಿತು ಇದೇ ಮೊದಲ ಬಾರಿಗೆ ನಟ ನಾಗಾರ್ಜುನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಮಗ ನಾಗಾರ್ಜುನ ಮತ್ತು ಸಮಂತಾ ಅಕ್ಟೋಬರ್ ನಲ್ಲಿ ವಿವಾಹ ವಿಚ್ಛೇದನ ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಿದ್ದರು. ಇದಕ್ಕೆ ಕಾರಣವೇನೆಂಬುದು ಬಹಿರಂಗವಾಗಿರಲಿಲ್ಲ.

ಆದರೆ ಈಗ ನಾಗಾರ್ಜುನ, ಮಗ ಮತ್ತು ಸೊಸೆ ಬೇರೆಯಾಗಿದ್ದರ ಬಗ್ಗೆ ಮಾತನಾಡಿದ್ದಾರೆ. ‘ಮೊದಲು ಸಮಂತಾ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ನನ್ನ ಮಗ ಕೂಡಾ ಒಪ್ಪಿದ್ದ. ಆದರೆ ಈ ವಿಚಾರವನ್ನು ನನಗೆ ಹೇಳಲು ನಾಗ ಹಿಂಜರಿದಿದ್ದ. ನನಗೆ ಹೇಳಿದ ಮೇಲೆ ಚಿಂತೆಯಾಗುತ್ತದೆ ಎಂದು ಸಮಾಧಾನ ಮಾಡಿದ್ದ. 2021 ರಲ್ಲಿ ಇಬ್ಬರೂ ಒಟ್ಟಿಗೆ ಹೊಸ ವರ್ಷಾಚರಣೆ ಮಾಡಿದ್ದರು. ಬಹುಶಃ ಇದಾದ ಬಳಿಕವೇ ಇಬ್ಬರ ನಡುವೆ ಸಮಸ್ಯೆ ಶುರುವಾಯಿತು’ ಎಂದು ನಾಗಾರ್ಜುನ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವರು ನನ್ನ ಬ್ರಾ ಸೈಝ್ ತೆಗೆದುಕೊಳ್ತಿದ್ದಾರೆ ಎಂದು ವಿವಾದ ಸೃಷ್ಟಿಸಿದ ನಟಿ